ಪುತ್ತೂರು: ಬೈಪಾಸ್ ರಸ್ತೆ ಪರ್ಲಡ್ಕ ಹಾಗೂ ಬೀರಮಲೆ ಪರಿಸರದಲ್ಲಿ ಸಂಚರಿಸುತ್ತಿದ್ದ ಸರ್ಪವೊಂದು ವಾಹನ ಅಪಘಾತದಲ್ಲಿ ಮೃತಪಟ್ಟಿರುತ್ತದೆ.
ಇದರ ಸದ್ಗತಿಗಾಗಿ ಜೂ.15ರಂದು ಅಪೂರ್ವ ಸೆಂಟರ್ (ಸತೀಶ್ ರೈಯವರ ಮನೆ) ಬೈಪಾಸ್ ರಸ್ತೆ ಇಲ್ಲಿ ಕೆಮ್ಮಿಂಜೆ ವೇ.ಮೂ. ಶ್ರೀಕೃಷ್ಣ ಕಲ್ಲೂರಾಯರವರ ನೇತೃತ್ವದಲ್ಲಿ ಸರ್ಪ ಸಂಸ್ಕಾರ ಕಾರ್ಯ ನಡೆಯಿತು. ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಕಾರ್ಯಕ್ರಮದ ಸಂಘಟಕರಾದ ಸತೀಶ್ ರೈ ನಡುಬೈಲು ಹಾಗೂ ಹರೀಶ್ ಆಚಾರ್ಯ ಹಾಗೂ ಬೀರಮಲೆ- ಬೈಪಾಸ್ ನಿವಾಸಿಗಳು, ಊರ-ಪರವೂರ ಹಿತೈಷಿಗಳು, ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಮುಖಂಡರುಗಳು ಉಪಸ್ಥಿತರಿದ್ದರು.