ಪುತ್ತೂರು: ಶಕ್ತಿ ಗೆಳೆಯರ ಬಳಗ ಪುತ್ತೂರು ಇದರ ಸಾರಥ್ಯದಲ್ಲಿ “ಏಕತಾನತೆಗೆ ಎಂದೂ ಶರಣಾಗುವುದಿಲ್ಲ ಎನ್ನುವ ಪ್ರತಿಜ್ಙೆಯೊಂದಿಗೆ, ಕಲಾ ಸಂಗಮದ ಶಿವದೂತೆ ಗುಳಿಗೆ ತಂಡದಿಂದ ತುಳು ನಾಟಕ ಛತ್ರಪತಿ ಶಿವಾಜಿ ಜೂ.14ರ ಸಂಜೆ ಇಲ್ಲಿನ ಪುರಭವನದಲ್ಲಿ ಪ್ರದರ್ಶನ ಅದ್ಧೂರಿ ಪ್ರದರ್ಶನ ಕಂಡಿತ್ತು.
ತುಳುನಾಡಿನ ಹೆಸರಾಂತ ನಿರ್ದೇಶಕ ವಿಜಯ ಕುಮಾರ್ ಕೋಡಿಯಾಲ್ ಬೈಲ್ ಇವರ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಾಟಕ ರಚನೆಗೊಂಡಿದ್ದು , ಶಿವಾಜಿ ಮಹಾರಾಜರಲ್ಲಿದ್ದ ದೇಶಪ್ರೇಮ ಹಾಗೂ ಈ ನೆಲದ ಸಂಸ್ಕೃತಿ , ಧರ್ಮದ ರಕ್ಷಣೆಗೆ ಅವರು ಪಟ್ಟಂತಹ ಶ್ರಮ ಇವೆಲ್ಲಾವೂ ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿದ್ದು , ಮುಂದಿನ ಪೀಳಿಗೆಯೂ ಕೂಡ ರಾಷ್ಟ್ರ ಭಕ್ತಿ , ಸಂಸ್ಕೃತಿ,ಸಂಸ್ಕಾರವನ್ನೆಲ್ಲಾ ಉಳಿಸಿ -ಬೆಳೆಸುವುದೇ ಮೂಲ ಉದ್ದೇಶ.

ಕಲಾ ಆಸಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಿಂದೂ ಸಮಾಜದ ಪ್ರಮುಖ ಗಣ್ಯರು ಹಾಗೂ ವಿವಿಧ ಸಂಘಟನೆಗಳು ಪ್ರಾಯೋಜಕತ್ವ ವಹಿಸಿಕೊಂಡು, ಕೊಂಬೆಟ್ಟು -ಬೊಳುವಾರು, ಮಹಾಲಿಂಗೇಶ್ವರ ದೇವಾಲಯದ ವಠಾರ, ಪಾಂಗ್ಲಾಯಿ ಪರಿಸರದ ಧಾರ್ಮಿಕ ಶಿಕ್ಷಣ ಕೇಂದ್ರದ ನೂರಕ್ಕೂ ಮಿಕ್ಕಿ ಮಕ್ಕಳಿಗೆ ಉಚಿತ ಪ್ರವೇಶವನ್ನೂ ಕೂಡ ಕಲ್ಪಿಸಿಕೊಟ್ಟರು.
ಮಹಾಲಿಂಗೇಶ್ವರ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಹಿಂದೂ ಸಂಘಟನೆಯ ಮುಖಂಡ ಮುರಳಿ ಕೃಷ್ಣ ಹಸಂತ್ತಡ್ಕ, ವಿ.ಹಿಂ.ಪ.ದ ಜಿಲ್ಲಾಧ್ಯಕ್ಷ ಡಾ.ಪ್ರಸನ್ನ, ಖ್ಯಾತ ನಾಟಕ ನಿರ್ದೇಶಕ ವಿಜಯ ಕುಮಾರ್ ಕೋಡಿಯಾಲ್ ಬೈಲ್, ಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ರಾಜೀವ್ ಬೊಳುವಾರು, ದಯಾನಂದ ಮುರಚ, ಸತೀಶ್ ಕೇಪುಳು, ರೋಹಿತ್ ಮುರ, ಧಾರ್ಮಿಕ ಶಿಕ್ಷಣ ಕೇಂದ್ರದ ನಿರ್ದೇಶಕಿಯರಾದ ಕೃಷ್ಣವೇಣಿ ಮುಳಿಯ ಮತ್ತು ಪ್ರಭಾವತಿ ರಾಜೀವ್ ಸಹಿತ ಹಲವರು ಅತಿಥಿ ಗಣ್ಯರುಗಳು ಪಾಲ್ಗೊಂಡಿದ್ದರು.
ಪುರುಷೋತ್ತಮ ಕೇಪುಳು ಕಾರ್ಯಕ್ರಮ ನಿರ್ವಹಿಸಿದ್ದರು.