ಸಾಯಿ ಮಹೇಶ ಕೆ. ಎಸ್. 523 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸುಹಾಸ್ ಟಿ. ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 3620 ನೇ ರ್ಯಾಂಕ್
ಪುತ್ತೂರು: ವ್ಯೆದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2025ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಾಯಿ ಮಹೇಶ ಕೆ. ಎಸ್. (ಕೊಂಬೆಟ್ಟಿನ ಸುಬ್ರಹ್ಮಣ್ಯ ಭಟ್ ಕೆ. ಹಾಗೂ ಪಾರ್ವತಿ ಸಿ. ದಂಪತಿಗಳ ಪುತ್ರ) 523 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದ ಕೆಟಗರಿ ವಿಭಾಗದಲ್ಲಿ 13569ನೇ ರ್ಯಾಂಕ್ ಪಡೆದಿರುತ್ತಾರೆ.
ತನ್ಮಯ್ ಕೃಷ್ಣ ಜಿ.ಎಸ್. (ನೇರಳಕಟ್ಟೆಯ ಗೋಪಾಲಕೃಷ್ಣ ಎನ್.ಹಾಗೂ ಸ್ವಪ್ನಾ ಎನ್. ದಂಪತಿಗಳ ಪುತ್ರ.) 457 ಅಂಕಗಳು, ಚೇತನ್ ಎಸ್. ಎನ್. (ಮೈಸೂರಿನ ನಾಗೇಂದ್ರ ಎಸ್.ಎ. ಜ್ಯೋತಿಲಕ್ಷ್ಮಿ ದಂಪತಿಗಳ ಪುತ್ರ) 442ಅಂಕಗಳನ್ನುಪಡೆದುಕೊಂಡಿರುತ್ತಾರೆ. ಸುಹಾಸ್ ಟಿ. (ದಾವಣಗೆರೆಯ ತಿಪ್ಪೇ ಸ್ವಾಮಿ ಹಾಗೂ ರಶ್ಮಿ ಬಿ. ವಿ. ದಂಪತಿಗಳ ಪುತ್ರ) 395 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 3620 ನೇ ರ್ಯಾಂಕ್ ಗಳಿಸಿದ್ದಾರೆ. ಹಿತೈಷಿಣಿಸಿ.ಎನ್ (ಪೆರಿಯಾ ಪಟ್ಟಣದ ನಾರಾಯಣ ಜೆ. ಹಾಗೂ ರೇಣುಕಾ ಆರ್. ದಂಪತಿಗಳ ಪುತ್ರಿ) 381 ಅಂಕಗಳು,ಯಶ್ವಿತಾ ಕುಲಾಲ್ (ಬಂಟ್ವಾಳ ತಾಲೂಕಿನ ದಿನೇಶ್ ಕೆ. ಹಾಗೂ ಸುಮತಿ ದಂಪತಿಗಳ ಪುತ್ರಿ) 375 ಅಂಕಗಳು, ಧಾತ್ರಿ ಆರ್. ರೈ (ನೆಹರೂ ನಗರದ ರವೀಂದ್ರ ಪಿ.ರೈ ಹಾಗೂ ಉಷಾ ರವೀಂದ್ರ ದಂಪತಿಗಳ ಪುತ್ರಿ) 370 ಅಂಕಗಳನ್ನು ಪಡೆದು ಕೊಂಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.