ಕಾಣಿಯೂರು: ಕಾೖಮಣ ಗ್ರಾಮದ ಮರಕ್ಕಡ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡಕ್ಕೆ ಅನುದಾನ ಒದಗಿಸುವಂತೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಅಗಳಿ, ಪಾರ್ವತಿ ಮರಕ್ಕಡ, ಬಾಲವಿಕಾಸ ಸಮಿತಿ ಅಧ್ಯಕ್ಷೆ ರೂಪ ಗಂಗಾಧರ ಗೌಡ ಬೈತಡ್ಕ, ಮರಕ್ಕಡ ಉಳ್ಳಾಕುಲು ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಗೌಡ ಬೈತಡ್ಕ, ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷೆ ಯಶ್ಮಿತಾ ಗಣೇಶ್, ಸ್ತ್ರೀಶಕ್ತಿ ಪ್ರತಿನಿಧಿ ಗಿರಿಜ ಬೈತಡ್ಕ, ಪೋಷಕರಾದ ಪ್ರಿಯ ಜೇಡರಕೇರಿ, ವಿದ್ಯಾ ಮರಕ್ಕಡ, ಮೀನಾಕ್ಷಿ ನಾರ್ಯ, ಸುಮಿತ್ರ ಜೇಡರಕೇರಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಸರೋಜಿನಿ ಮತ್ತು ಜಯಶ್ರೀ ಉಪಸ್ಥಿತರಿದ್ದರು.