ಆರ್ಯಾಪು ಗ್ರಾ.ಪಂ‌. ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ರವರಿಂದ ಧನಸಹಾಯ

0

ಪುತ್ತೂರು : ಆರ್ಯಾಪು ಗ್ರಾ.ಪಂ‌. ಸದಸ್ಯರು, ದೊಡ್ಠಡ್ಕ ಶ್ರೀ ಷಣ್ಮುಖ ಜ್ಯೋತಿಷ್ಯಾಲಯದ‌ ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯರವರು ಕೆಲ ದಿನಗಳ ಹಿಂದೆ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಒಳತ್ತಡ್ಕ ನಿವಾಸಿ ಸುದೀಪ್ ರವರ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ಹೇಳಿ ಧನಸಹಾಯ ನೀಡಿದರು‌.

ಒಳತಡ್ಕ ನಿವಾಸಿಯಾಗಿರುವ ಭವಾನಿ ಆಚಾರ್ಯ ರವರು ನೂತನ ಗೃಹ ನಿರ್ಮಾಣಕ್ಕೆ ಮುಂದಾಗಿದ್ದು, ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಮನೆಗೆ ತೆರಳಿದ ಸುಬ್ರಹ್ಮಣ್ಯ ಬಲ್ಯಾಯರವರು ಮನೆಯವರೊಂದಿಗೆ ಮಾತುಕತೆ ನಡೆಸಿ ಅವರಿಗೆ ಧನ‌ಸಹಾಯ ನೀಡಿದರು‌.

LEAVE A REPLY

Please enter your comment!
Please enter your name here