ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಕೀರ್ಣದಲ್ಲಿ ಕಾಮನ್ ಸೆಂಟರ್ ಶುಭಾರಂಭ

0

ಪಾಣಾಜೆ: ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಂಕೀರ್ಣದಲ್ಲಿ ಬ್ಯಾಂಕಿನ ವತಿಯಿಂದ ನಡೆಸಲ್ಪಡುವ, ಕಾಮನ್ ಸೆಂಟರ್, ವಾಯುಮಾಲಿನ್ಯ ತಪಾಸಣೆ ಹಾಗೂ ವಾಹನಗಳ ಇನ್ಶೂರೆನ್ಸ್ ಸೇವೆಗಳ ಉದ್ಘಾಟನಾ ಕಾರ್ಯಕ್ರಮ ಜೂ. 16 ರಂದು ನಡೆಯಿತು.

ಸಂಘದ ಲೆಕ್ಕಪತ್ರ ಪರಿಶೋಧಕ ಆರ್ .ಡಿ ಶಾಸ್ತ್ರಿ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ, ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು,   ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಕಡಂದೇಲು ಹಾಗೂ  ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.

ಸಿಬಂದಿ ಪ್ರದೀಪ್ ರೈ  ಸೂರಂಬೈಲು ನಿರೂಪಿಸಿದರು.

LEAVE A REPLY

Please enter your comment!
Please enter your name here