ಕುಂಬ್ರ : ಕುಂಬ್ರ ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ವೈ ಎಸ್,ಎಸ್ ಎಸ್ ಎಫ್ ಶಾಖೆಯ ವತಿಯಿಂದ ಮಹ್ಳರತುಲ್ ಬದ್ರಿಯಾ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಮರಣಿಕೆ ನೀಡುವ ಕಾರ್ಯಕ್ರಮ ಕುಂಬ್ರ ಯೂನಿಟ್ SYS ಅಧ್ಯಕ್ಷ ಕರೀಂ ಹಾಜಿ ಕಾವೇರಿ ರವರ ನೇತೃತ್ವದಲ್ಲಿ ಕುಂಬ್ರ ಕಚೇರಿಯಲ್ಲಿ ನಡೆಯಿತು.


ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಅಬ್ದುರ್ರಹ್ಮಾನ್ ಝುಹ್ರಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಕರ್ನಾಟಕ ಮುಸ್ಲಿಂ ಜಮಾತ್ ಕುಂಬ್ರ ಸರ್ಕಲ್ ಅಧ್ಯಕ್ಷ ಮುಕ್ಕೂರು ಉಸ್ತಾದ್ ಹಿತನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಾರ್ಡ್ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಉಸ್ತಾದ್ ಮೂಸಾ ಉಸ್ತಾದ್ ಅನ್ವರ್ ಫಾಳಿಲಿ ಬಾತಿಶ ಝುಹ್ರಿ ಅಬ್ದುಲ್ ರಹ್ಮಾನ್ ಮಜೀದ್ ಅಸಿಫ್ ಹಸೈನಾರ್ ಮೊದಲಾದವರು ಭಾಗವಹಿಸಿದರು.