ವಿವೇಕಾನಂದದಲ್ಲಿ ‘ಯಕ್ಷಗಾನ ತಾಳಮದ್ದೋಲಿ ಲೇಸ್’ : “ಕಿಟ್ನ ರಾಜಿ ಪರ್ಸಂಗೊ- ಒಂಜಿ ಸನ್ನಿವೇಶ” ತಾಳಮದ್ದಳೆ

0

ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಹಾಗೂ ತುಳು ಅಪ್ಪೆ ಕೂಟೊ, ಪುತ್ತೂರು ಒಟ್ಟಾಗಿ ಜೂನ್ 14 ರಂದು ಆಯೋಜಿಸಿದ ಯಕ್ಷಗಾನ ತಾಳಮದ್ದೋಲಿ ಲೇಸ್ ಕಾರ್ಯಕ್ರಮ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು. ಇದರ ಅಂಗವಾಗಿ “ಕಿಟ್ನ ರಾಜಿ ಪರ್ಸಂಗೊ- ಒಂಜಿ ಸನ್ನಿವೇಶ” ತಾಳಮದ್ದಳೆ ನಡೆಸಿಕೊಟ್ಟರು.

ಹಿಮ್ಮೇಳದಲ್ಲಿ ಭಾಗವತರಾಗಿ ಮಲ್ಲಿಕಾ ಎ ಸಿದ್ದಕಟ್ಟೆ, ಮದ್ದಳೆ ಶರಣ್ಯ ನೆತ್ತರಕೆರೆ, ಚೆಂಡೆ ಪರೀಕ್ಷಿತ್ ಹಂದ್ರಟ್ಟ, ಮುಮ್ಮೇಳದಲ್ಲಿ ಕೃಷ್ಣನಾಗಿ ವೀಣಾ ತಂತ್ರಿ ಕೆಮ್ಮಿಂಜೆ, ಭಾರತಿ ರೈ ಕೌಡಿಚ್ಚಾರ್, ಕೌರವನಾಗಿ ಹರಿಣಾಕ್ಷಿ ಜೆ ಶೆಟ್ಟಿ, ಅರ್ಜುನನಾಗಿ ಪ್ರೇಮಲತಾ ರಾವ್, ಬಲರಾಮನಾಗಿ ಶ್ರೀವಾಸವಿ ತುಳುನಾಡ್ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತ ಸತೀಶ್ ಪ್ರಸ್ತಾವಿಕವಾಗಿ ಮಾತನಾಡಿ, ಆಡಳಿತ ಮಂಡಳಿ ಸದಸ್ಯರಾದ ನವೀನ್ ಪ್ರಸಾದ್ ರೈ ಕೈಕಾರ ಕಲಾವಿದರನ್ನು ಗೌರವಿಸಿದರು.

ಸಹಾಯಕ ಪ್ರಾಧ್ಯಾಪಕಿ ಭುವನೇಶ್ವರಿ ಎ ಎನ್ ಸ್ವಾಗತಿಸಿ ನಿರೂಪಿಸಿದರು. ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here