ಬೆಳ್ಳಾರೆ : ಬಾಳಿಲ ಬಳಿ ರಸ್ತೆ ಅಪಘಾತದಲ್ಲಿ ಹಾಲು ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿದ್ದು, ಸುಮಾರು 600 ಲೀಟರ್ ಹಾಲು ರಸ್ತೆ ಪಾಲಾದ ಹಾಗೂ ಚಾಲಕ ಗಾಯಗೊಂಡ ಘಟನೆ ಜೂ.17ರಂದು ನಡೆದಿದೆ.
ಪಿಕಪ್ ವಾಹನವು ನಾಲ್ಕು ಹಾಲಿನ ಸೊಸೈಟಿ ಯಿಂದ ಸಂಗ್ರಹಿಸಿದ 20 ಹಾಲಿನ ಕ್ಯಾನ್ಗಳನ್ನು ತುಂಬಿಕೊಂಡು ಬೆಳ್ಳಾರೆ ಕಡೆಗೆ ಸಾಗುತ್ತಿದ್ದಾಗ, ಎದುರಿನಿಂದ ಬಂದ ಟಾಟಾ ಯೋಧ ವಾಹನವು ಢಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮವಾಗಿ ಹಾಲಿನ ಕ್ಯಾನ್ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು, 600 ಲೀ. ಹಾಲು ನಷ್ಟವಾಗಿದೆ.
ಘಟನೆಯಲ್ಲಿ ಪಿಕಪ್ ಚಾಲಕ ಸಯ್ಯದ್ ಅಬ್ದುಲ್ ಖಾದರ್ ಚೆನ್ನಾವರ ಗಾಯಗೊಂಡಿದ್ದು, ತಕ್ಷಣವೇ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಲ್ಲದೆ ಅಪಘಾತ ಸಂದರ್ಭದಲ್ಲಿ ರಸ್ತೆ ಬದಿಯಿದ್ದ ವೆಂಕಟರಮಣ ಭಟ್ ,ಟಾಟಾ ಯೋಧ ಚಾಲಕ ಮೋಹನ್ ಕುಮಾರ್ ಅವರಿಗೂ ಗಾಯಗಳಾಗಿದೆ.
ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.