ಕುಂಜಾರು ಗಣೇಶೋತ್ಸವ ಸಮಿತಿಗೆ ಆಯ್ಕೆ – ಅಧ್ಯಕ್ಷ ಶ್ರೀಧರ ಕುಂಜಾರು, ಕಾರ್ಯದರ್ಶಿ ರಂಜನ್ ಪೊಟ್ಟಗುಳಿ

0

ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 2025ರ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಧರ್ ಕುಂಜಾರು, ಕಾರ್ಯದರ್ಶಿಯಾಗಿ ರಂಜನ್ ಪೊಟ್ಟಗುಳಿ ಆಯ್ಕೆಯಾಗಿದ್ದಾರೆ.


ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆದ ಗಣೇಶೋತ್ಸವ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜತೆ ಕಾರ್ಯದರ್ಶಿಯಾಗಿ ಲೋಕೇಶ್ ಬೇರಿಕೆ, ಶವಿನ ಕುಂಜಾರು, ಉಪಾಧ್ಯಕ್ಷರಾಗಿ ಶೇಖರ್ ಯರ್ಮುಂಜ, ದಿನೇಶ್ ಪಡ್ನೂರು ಹಾಗೂ ಕೋಶಾಧಿಕಾರಿಯಾಗಿ ಕೀರ್ತಿಕ್ ಕುಂಜಾರುರವರು ಆಯ್ಕೆಯಾಗಿದ್ದಾರೆ.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರೆಕೆರೆ ವೆಂಕಟ್ರಮಣ ಭಟ್, ಸದಸ್ಯರಾದ ರಾಧಾಕೃಷ್ಣ ಕುಂಜಾರು, ಯಶೋಧರ ಕುಂಜಾರು, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಶ್ರೀಧರ ಪಂಜುಗುಡ್ಡೆ, ಪೂವಪ್ಪ ದೇಂತಡ್ಕ, ಸದಸ್ಯರಾದ ಅವಿನಾಶ್ ಕಡ್ತಿಮಾರ್, ರಾಜೇಶ್ ಆಟಿಕ್ಕು, ಹರ್ಷಿತ್, ರಂಜಿತ್ ಕಡ್ತಿಮಾರ್, ಗಣೇಶ್ ಬೇರಿಕೆ, ಕೃಷ್ಣ ಮೂರ್ತಿ ಪಂಜಿಗುಡ್ಡೆ, ಸುಧಾಕರ ದೇಂತಡ್ಕ, ಹರೀಶ್ ಪಡ್ನೂರು, ಕಿಶೋರ್ ಕುಂಜಾರು, ನೀರಜ್ ಕುಂಜಾರು, ಸುಹಾನ್ ಕುಂಜಾರು, ಗಿರಿಧರ್ ಪಂಜಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here