ಬಡಗನ್ನೂರು: ಖಾಸಗಿ ವ್ಯಕ್ತಿಯೋರ್ವರು ಅಡಿಕೆ ತೋಟ ಲೀಸ್ ಗೆ ಪಡೆದು ಆ ಜಾಗದಲ್ಲಿ ಹಸುಗಳನ್ನು ತಂದು ಬಿಟ್ಟು ವ್ಯಕ್ತಿ ನಾಪತ್ತೆಯಾಗಿದ್ದು, ಹಸುಗಳನ್ನು ನೋಡಿಕೊಳ್ಳಲು ಯಾರು ಇಲ್ಲದ ಹಿನ್ನಲೆ ಬಡಗನ್ನೂರಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸುಮಾರು 12 ಹಸುಗಳು ತೋಟದಲ್ಲಿದ್ದು, ಹಗಲು ಮತ್ತು ರಾತ್ರಿ ತೋಟದಲ್ಲಿಯೇ ಬಿಟ್ಟ ಕಾರಣ ಎರಡು ಹಸುಗಳು ಕೆರೆ ಮತ್ತು ಕಣಿವೆಗೆ ಬೀಳುತ್ತಿವೆ. ಉಳಿದ ಹತ್ತು ಹಸುಗಳು ಬಡಗನ್ನೂರು ಪರಿಸರದಲ್ಲಿ ಸುತ್ತುವರಿಯುತ್ತಿವೆ. ಅದರಲ್ಲಿ ಒಂದು ಹೋರಿ,ದನ, ಜನರನ್ನು ನೋಡಿದರೆ ಸದ್ದು ಮಾಡಿಕೊಂಡು ಮುಂದೆ ಮುಂದೆ ಬರುತ್ತದೆ. ಮಾತ್ರವಲ್ಲದೇ ರಸ್ತೆಯಲ್ಲಿ ಅಡ್ಡ ನಿಂತು ವಾಹನ ಸಂಚಾರಕ್ಕೂ ತೊಂದರೆ ಉಂಟು ಮಾಡುತ್ತಿದೆ. ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ನಡೆದಾಡಲು ಬಹಳ ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ಧಾರೆ.
ಈ ಬಗ್ಗೆ ಗ್ರಾಮಸ್ಥರು ಈಶ್ವರಮಂಗಲ ಹೊರ ಠಾಣೆಗೆ ಹಾಗೂ ಬಡಗನ್ನೂರು ಗ್ರಾಮ ಪಂಚಾಯತಿಗೆ ದೂರು ಅರ್ಜಿ ಸಲ್ಲಿಸಿದರೂ ಯಾವುದೇ ಫಲಕಾರಿಯಾಗಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.