ಕೆಂಪು ಕಲ್ಲು, ಮರಳುಗಾರಿಕೆ ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು – ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

0

ಪುತ್ತೂರು:ಮರಳುಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದೆ.ಅದು ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು.ಕಾನೂನು ಬಾಹಿರವಾಗಿ ನಡೆಯುವುದನ್ನು ಪೊಲೀಸರು ಕಂಟ್ರೋಲ್ ಮಾಡುತ್ತಿದ್ದಾರೆ.ಅವರ ಕೆಲಸ ಅವರು ಮಾಡುತ್ತಿದ್ದಾರೆ.ಇಲ್ಲಿಗಾಗಿ ಮಾಡಿ ಎಂದು ಹೇಳಲಾಗುವುದಿಲ್ಲ.ಅದಕ್ಕೆ ಅನುಮತಿಯನ್ನು ಕೂಡಾ ಕೊಡುವುದಿಲ್ಲ.ಕಾನೂನು ಚೌಕಟ್ಟಿನಲ್ಲಿ ಅದನ್ನು ತರಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಗೊಳಿಸುವ ಕುರಿತು ಗೃಹ ಸಚಿವರ ಜೊತೆ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದವರು ತಿಳಿಸಿದರು.ಪುತ್ತೂರಿನಲ್ಲಿ ವಾಣಿಜ್ಯ ತೆರಿಗೆ ಉದ್ಘಾಟನೆ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.ಮಳೆಯಿಂದ ಗುಡ್ಡ ಕುಸಿತ ಆದ ಜಾಗಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಮೊದಲನೆ ಹಂತದಲ್ಲಿ 72 ಕಡೆಯಲ್ಲಿ ಪರಿಹಾರ ನೀಡಲಾಗಿದೆ.ಹಣಕಾಸಿನ ಸಮಸ್ಯೆ ಇಲ್ಲ.ಮಳೆಗಾಲದ ರಸ್ತೆ ದುರಸ್ತಿಯಲ್ಲಿ ಶಾಸಕರ ಕೆಲಸವನ್ನು ನೋಡಿ ಎಲ್ಲರೂ ಮಾಡುವುದು ಒಳ್ಳೆಯದು.ಎಲ್ಲವೂ ಸರಕಾರದಿಂದ ಸರಿಪಡಿಸಲಾಗುತ್ತದೆ ಎಂದು ಹೇಳಲಾಗುವುದಿಲ್ಲ.ಹಾಗಾಗಿ ತಕ್ಷಣಕ್ಕೆ ನಾವು ಸ್ಪಂದಿಸಬೇಕು.ಶಾಸಕರನ್ನು ನೋಡಿ ಎಲ್ಲರೂ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್.ಐ.ಎಗೆ ಹಸ್ತಾಂತರ ಮಾಡಲು ನಮ್ಮದೇನೂ ಅಭ್ಯಂತರ ಇಲ್ಲ ಎಂದು ಗೃಹಸಚಿವರು ಹೇಳಿದ್ದಾರೆ.ನಮ್ಮ ಪೊಲೀಸರು, ಕೊಲೆ ಮಾಡಿದವರನ್ನು ಹಿಡಿದಿದ್ದಾರೆ ಮತ್ತು ಅದರ ಹಿಂದೆ ಯಾರಿದ್ದಾರೆ ಎಂಬುದರ ಮಾಹಿತಿ ಪಡೆದುಕೊಂಡಿದ್ದಾರೆ.ನಮ್ಮ ಪೊಲೀಸರ ಮಾಹಿತಿ ಪಡೆದುಕೊಂಡೇ ಎನ್‌ಐಎ ಅವರು ಬರುತ್ತಿರುವುದು.ನಮ್ಮ ಪೊಲೀಸರ ಮೇಲೆ ನಮಗೆ ವಿಶ್ವಾಸ ಇದೆ.ಆದರೆ ಬಿಜೆಪಿಯವರಿಗೆ ಎನ್‌ಐಎ ಬರಬೇಕೆಂಬ ಆಸಕ್ತಿ ಇದೆ.ಹಾಗಾಗಿ ಎನ್‌ಐಎ ಬಂದು ತನಿಖೆ ಮಾಡಲಿ.ಯಾರು ಇನ್ವಾಲ್ವ್ ಆಗಿದ್ದಾರೆ ಅವರನ್ನು ಹಿಡಿಯಬೇಕು.ಅಬ್ದುಲ್ ರಹಿಮಾನ್ ಹತ್ಯೆಯಲ್ಲಿ ಕೂಡಾ, ಅದರ ಹಿಂದೆ ಯಾರು ಇದ್ದಾರೆ ಎಂಬ ಮಾಹಿತಿ ಇದೆ.ಆದ್ದರಿಂದ ತನಿಖೆಯಲ್ಲಿ ನಮ್ಮ ಪೊಲೀಸ್ ಹಿನ್ನಡೆಯಿಲ್ಲ.ಆದರೆ ಬಿಜೆಪಿಯವರಿಗೆ ರಾಜಕಾರಣ ಮಾಡುವ ಉದ್ದೇಶ.ಅವರಿಗೆ ಹಿಂದು ಸತ್ತರೆ ಮಾತ್ರ ನೋವಾಗುತ್ತದೆ.ಅವರಿಗೆ ಮನುಷ್ಯತ್ವ ಇಲ್ಲ.ಒಟ್ಟು ರಾಜಕೀಯ ಮಾಡುತ್ತಾರೆ.ನಾವು ರಾಜಕೀಯ ಮಾಡಲು ಬಂದಿಲ್ಲ.ನಮಗೆ ಎಲ್ಲರೂ ಒಂದೆ.ಇಂತಹ ಘಟನೆ ನಡೆದಾಗ ಒಂದೇ ರೀತಿಯ ನ್ಯಾಯ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.

LEAVE A REPLY

Please enter your comment!
Please enter your name here