ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಚಿಕ್ಕಮುಡ್ನೂರು ಬಿಲ್ಲವ ಗ್ರಾಮ ಸಮಿತಿ ಇದರ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಹಾಗೂ ನೂತನ ಪದಾಧಿಕಾರಿಗಳ ಅಯ್ಕೆ ಕಾರ್ಯಕ್ರಮ ಜೂ.15 ರಂದು ದ.ಕ.ಜಿ.ಪ. ಹಿ.ಪ್ರಾ ಶಾಲೆ ಚಿಕ್ಕಮುಡ್ನೂರು ಬಿರ್ನಹಿತ್ಲು ಇಲ್ಲಿ ಜರಗಿತು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಿಲ್ಲವ ಸಂಘದ ಉಪಾಧ್ಯಕ್ಷೆ ವಿಮಲ ಸುರೇಶ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನಕುಮೆರ್, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯನ್, ಗುರುಮಂದಿರದ ಕಾರ್ಯ ನಿರ್ವಹಣಾಧಿಕಾರಿ ಉದಯ ಕುಮಾರ್ ಕೋಲಾಡಿ, ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಭಾಸ್ಕರ ಅಮೀನ್ ಆನಂತಿಮಾರು, ವಲಯ ಸಂಚಾಲಕರು ಹಾಗೂ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಬಿ.ಅಣ್ಣಿ ಪೂಜಾರಿ, ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷೆ ಗೀತಾ ಗಂಗಾಧರ ಪೂಜಾರಿ, ಗಿರಿಜ ಪುರುಷೋತ್ತಮರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಬಂದಂತಹ ಎಲ್ಲಾ ಅತಿಥಿಗಳು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ದೀಕ್ಷಾ ಎ.ಆನಂತಿಮಾರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುಶ್ಮಾ ಎ. ಆನಂತಿಮಾರು ಲೆಕ್ಕ ಪತ್ರ ಮಂಡಿಸಿ, ವಂದಿಸಿದರು.

ಪದಾಧಿಕಾರಿಗಳ ಆಯ್ಕೆ..
ನೂತನ ಅಧ್ಯಕ್ಷರಾಗಿ ಬಿ.ಅಣ್ಣಿಪೂಜಾರಿ, ಉಪಾಧ್ಯಕ್ಷರಾಗಿ ಸುರೇಂದ್ರ ಪೂಜಾರಿ ಅಡ್ಲಿಮಜಲು, ಕಾರ್ಯದರ್ಶಿಯಾಗಿ ವಸಂತ ಪೂಜಾರಿ ಆನಂತಿಮಾರು, ಜೊತೆ ಕಾರ್ಯದರ್ಶಿಯಾಗಿ ಗೋಪಾಲ ಪೂಜಾರಿ ಬಿರಿಗ, ಕೋಶಾಧಿಕಾರಿಯಾಗಿ ಪ್ರಿಯಾಂಕ ಬಿ, ದಯಾನಂದ ಪೂಜಾರಿ ಆನಂತಿಮಾರುರವರು, ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಗೀತಾ ಗಂಗಾಧರ ಪೂಜಾರಿ, ಉಪಾಧ್ಯಕ್ಷರಾಗಿ ಸುನೀತ ಸುರೇಂದ್ರ ಪೂಜಾರಿ ಅಡ್ಲಿಮಜಲು, ಕಾರ್ಯದರ್ಶಿಯಾಗಿ ಜಯಶ್ರೀ ಉದಯ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಶೃತಿ ಭಾಸ್ಕರ ಅಮೀನ್ ಆನಂತಿಮಾರು, ಕೋಶಾಧಿಕಾರಿಯಾಗಿ ಉಮಾವತಿ ಗೋಪಾಲ ಪೂಜಾರಿ ಬಿರಿಗ ಅಯ್ಕೆಯಾಗಿರುತ್ತಾರೆ.