ಪುತ್ತೂರು: ಅಖಿಲ ಹವ್ಯಕ ಮಹಾಸಭಾ, ಪುತ್ತೂರು ಶಾಖೆಯ ವತಿಯಿಂದ, ಬನ್ನೂರಿನ ಹವ್ಯಕ ಸಭಾಭವನದಲ್ಲಿ ಜೂ.21ಕ್ಕೆ ಬೆಳಗ್ಗೆ 6.30 ರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ’ಸ್ವಸ್ಥ ಸ್ವಾಸ್ಯ’ ಕಲ್ಪನೆಯೊಂದಿಗೆ ಆಚರಿಸಲಾಗುವುದು.
ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ವಿ.ಜಿ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯೋಗ ಚಿಕಿತ್ಸಾ ತಜ್ಞ ಆಡಿ. ಗೌರಿಶ್ಯಾಮ ಸುದರ್ಶನ ಅವರು ಆಯುಷ್ ಇಲಾಖೆ ನಿರ್ಣಯಿಸಿದ ಯೋಗಾಸನ, ಪ್ರಾಣಾಯಾಮಗಳನ್ನು ನಡೆಸಿ ಕೊಡಲಿದ್ದಾರೆ. ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮ ಪ್ರಧಾನ ಮಂತ್ರಿಗಳ ಸ್ವಸ್ಥ ಸಮಾಜ ನಿರ್ಮಾಣದ ಆಶಯವನ್ನು ಸಾಕಾರಗೊಳಿಸಲು ಭಾಗೀಧಾರಿಗಳಬೇಕೆಂದು ಅಖಿಲ ಹವ್ಯಕ ಬ್ರಾಹ್ಮಣ ಸಭಾದ ನಿರ್ದೇಶಕ ಶಿವಶಂಕರ ಭಟ್ ಬೋನಂತಾಯ ಅವರು ತಿಳಿಸಿದ್ದಾರೆ.