ಕೊಳ್ತಿಗೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ – ಮನವಿ

0

ಡಿಪೋ‌ ಮ್ಯಾನೇಜರ್ ಭರವಸೆ

ಪುತ್ತೂರು: ಕಳೆದ ಒಂದೆರಡು ತಿಂಗಳುಗಳಿಂದ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಮಸ್ಯೆ ಉಂಟಾಗಿದೆ ಎಂದು ಕೊಳ್ತಿಗೆ ಪಂಚಾಯತ್ ಅಧ್ಯಕ್ಷೆ ಅಕ್ಕಮ್ಮ ನೇತೃತ್ವದ ನಿಯೋಗ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕೊಳ್ತಿಗೆ ಗ್ರಾಮದ ಜನಸಾಮಾನ್ಯರಿಗೆ ಕಳೆದ ಅನೇಕ ವರ್ಷಗಳಿಂದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿದ್ದ ಕೆಲವು ಬಸ್ ಕಳೆದ 2 ತಿಂಗಳುಗಳಿಂದ ತಮ್ಮ ಓಡಾಟವನ್ನು ನಿಲ್ಲಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನೇಕ ತೊಂದರೆಗಳು ಉಂಟಾಗುತ್ತಿದೆ ಎಂದು ಕೊಳ್ತಿಗೆ ಗ್ರಾಮ ಪಂಚಾಯತ್ ಆಡಳಿತ ಅಧ್ಯಕ್ಷೆ ಅಕ್ಕಮ್ಮ ನೇತೃತ್ವದಲ್ಲಿ ನಿಯೋಗ ತೆರಳಿ ಡಿಪೋ ಮ್ಯಾನೇಜರ್ ಜೊತೆಗೆ ‌ಚರ್ಚಿಸಿದರು. ಪ್ರಸ್ತುತ ಡಿಪೋದಲ್ಲಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಕೊರತೆಯಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದೀಗ ಚಾಲಕ – ನಿರ್ವಾಹಕರ ನೇಮಕಾತಿ ನಡೆಯುತ್ತಿದ್ದು ಮುಂದಿನ ತಿಂಗಳ ಜುಲೈ 1ರಿಂದ 80 ಮಂದಿ ಸಿಬ್ಬಂಧಿಗಳು ಡಿಪೋಗೆ ಸೇರಿಕೊಳ್ಳಲಿದ್ದಾರೆ. ಜುಲೈ ಒಂದನೇ ತಾರೀಖಿನಿಂದ ಮತ್ತೆ ಬಸ್ಸು ಸೇವೆಯನ್ನು‌ ಹಿಂದಿನಂತೆಯೇ ನೀಡಲಿದ್ದೇವೆ ಎಂದು ಡಿಪೋ‌ ಮ್ಯಾನೇಜರ್ ನಿಯೋಗಕ್ಕೆ ಭರವಸೆ ನೀಡಿದರು.

ನಿಯೋಗದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ , ಸದಸ್ಯರುಗಳಾದ ಪವನ್ ಡಿ.ಜಿ , ವೇದಾವತಿ,ಯಶೋದಾ ಹಾಗೂ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ , ಪುತ್ತೂರು ಕಾಂಗ್ರೆಸ್ ಮುಖಂಡರಾದ ರಾಮಚಂದ್ರ ಸೊರಕೆ ಮತ್ತು ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here