ಆಲಂಕಾರು: ಸಮಾಜದಲ್ಲಿ ಸಾತ್ವಿಕ ಬದಲಾವಣೆಯನ್ನು ಯೋಗದ ಮುಖಾಂತರ ತರುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ಮಂಗಳೂರು ಮಹಾನಗರ, ಉಪ್ಪಿನಂಗಡಿ ನಗರ,ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ (ರಿ.) ಮಂಗಳೂರು, ಆಯುಷ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಇದರ ಸಹಯೋಗದೊಂದಿಗೆ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಧೈಯೋದ್ದೇಶದೊಂದಿಗೆ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ನೇತ್ರಾವತಿ ಸಮುದಾಯ ಭವನ ಉಪ್ಪಿನಂಗಡಿ, ಶ್ರೀ ಭಾರತಿ ಶಾಲೆ ಆಲಂಕಾರು, ಶ್ರೀ ಶಬರೀಶ ಕಲಾಮಂದಿರ ಅಯ್ಯಪ್ಪ ಬೆಟ್ಟ ನೆಲ್ಯಾಡಿ ಮತ್ತು ನಮ್ಮ ಮನೆ ಹವ್ಯಕ ಭವನ ಗುರುವಾಯನಕೆರೆ ಇಲ್ಲಿ ಜೂ.21ರಂದು ಬೆಳಗ್ಗೆ ಗಂಟೆ 5.00ರಿಂದ 06.30ರವರೆಗೆ ನಡೆಯಲಿದೆ. ಆಲಂಕಾರು ನೆಲ್ಯಾಡಿ ,ಕೊಕ್ಕಡ, ಉಪ್ಪಿನಂಗಡಿ, ಗೇರುಕಟ್ಟೆ,ಗುರುವಾಯನಕೆರೆ ಮತ್ತು ಬೆಳ್ತಂಗಡಿಯ ಯೋಗಬಂಧುಗಳು, ಶಾಸಕರು,ಇತರೇ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500ಕ್ಕೂ ಮಿಕ್ಕಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು spyss ಉಪ್ಪಿನಂಗಡಿ ನಗರ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.