ಪುತ್ತೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಮಹತ್ವಕಾಂಕ್ಷೆಯ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನೂತನ ಶೈಕ್ಷಣಿಕ ವರ್ಷಾರಂಭ ಹಾಗೂ ಗ್ರಾಮೀಣ ಸರಕಾರಿ ಮಕ್ಕಳಿಗೆ ಉಚಿತ ಶಿಕ್ಷಣದ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭವು ಜೂ.21ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಬೈಪಾಸ್ ರಸ್ತೆಯ ಒಕ್ಕಲಿಗ ಗೌಡರ ಭವನದ ಚುಂಚಶ್ರೀ ಮಿನಿ ಹಾಲ್ನಲ್ಲಿ ನಡೆಯಲಿದೆ.
ಪುತ್ತೂರು ಶಾಸಕರಾದ ಅಶೋಕ್ಕುಮಾರ್ ರೈ ಕಾರ್ಯಕ್ರಮದ ಉದ್ಘಾಟನೆಗೈಯಲಿದ್ದಾರೆ. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಚೆಯರ್ಮೇನ್ ಹಾಜಿ ಝಕರಿಯಾ ಜೋಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಯ ಮೂಲಕ 50 ಸರಕಾರಿ ಶಾಲೆಗಳು ಮತ್ತು 26 ವಿವಿಧ ಕೇಂದ್ರಗಳಲ್ಲಿ 3,650 ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸಿ ಕೊಡಲಾಗಿದ್ದು, ಇದರ ಸಾಂಕೇತಿಕ ಸರ್ಟಿಫಿಕೇಟ್ ವಿತರಣೆ ನಡೆಯಲಿದೆ ಎಂದು ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.