ಬೆಟ್ಟಂಪಾಡಿ: ಇಲ್ಲಿಯ ರೆಂಜ ಖುವ್ವತುಲ್ ಇಸ್ಲಾಂ ಸೆಕಂಡರಿ ಮದ್ರಸ ವಿದ್ಯಾರ್ಥಿಗಳ ಸಂಘಟನೆ ಸುನ್ನೀ ಬಾಲ ಸಂಘ (ಎಸ್ ಬಿ ಎಸ್) ದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮುಖ್ಯ ಅಧ್ಯಾಪಕರಾದ ಹನೀಫ್ ಸಖಾಫಿ ಪೇರಮೊಗರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖತೀಬ್ ಕಲಂದರ್ ಸಅದಿ ಉದ್ಘಾಟಿಸಿ ವಿದ್ಯಾರ್ಥಿಗಳ ಪ್ರತಿಭೆ, ನಾಯಕತ್ವ ಗುಣ ದ ಬಗ್ಗೆ ಮಾತಾಡಿದರು.
ನಂತರ ನೂತನ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆದು, ಅಧ್ಯಕ್ಷರಾಗಿ ಮುಹಮ್ಮದ್ ಅನ್ಸಾಬ್, ಪ್ರಧಾನ ಕಾರ್ಯದರ್ಶಿಯಾಗಿ ವಾಸಿಲ್ ಮುಬಾರಕ್, ಕೋಶಾಧಿಕಾರಿಯಾಗಿ ಅಹ್ಮದ್ ಸುಹೈಲ್
ಉಪಾಧ್ಯಕ್ಷರಾಗಿ ಮುಹಮ್ಮದ್ ಶಮ್ಮಾಸ್, ಮುಹಮ್ಮದ್ ಅಫ್ಸಲ್ ಜತೆ ಕಾರ್ಯದರ್ಶಿಗಳಾಗಿ ಅಬ್ದುರ್ರಹೀಂ, ಮುಹಮ್ಮದ್ ಅಯಾನ್ ಕ್ಯಾಂಪಸ್ ನಾಯಕರಾಗಿ ಸಾಬಿತ್, ಮುಬಸ್ಸಿಲ್, ಮಾಜಿದಾ, ಆಫಿಯಾ ಕಾರ್ಯಕ್ರಮದ ನಿರ್ವಹಣೆಗಾಗಿ ಅನೀಸ್, ಸುಹೈಲ್, ಮುಫೀದಾ, ನೂಹಾ, ಗ್ರಂಥಾಲಯ ನಿರ್ವಾಹಕರಾಗಿ ಸ್ವಾಲಿಹಾ, ಆಯಿಶಾ, ಹಾಗೂ ಸ್ವಚ್ಛತಾ ಉಸ್ತುವಾರಿ ಗಳಾಗಿ ನಿಬ್ರಾಸ್, ನವಾಲ್, ಅಲ್ಫಾ, ಶಮ್ನಾ ಮುಂತಾದವರು ಆಯ್ಕೆಯಾದರು. ಮೊದಲಿಗೆ ಅಧ್ಯಾಪಕ ಅಬ್ದುನ್ನಾಸಿರ್ ಜೌಹರಿ ಸ್ವಾಗತಿಸಿ, ಕೊನೆಗೆ ನೂತನ ಕಾರ್ಯದರ್ಶಿ ವಂದಿಸಿದರು.