ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆ (ಪುತ್ತೂರು) ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೇಶವ ಸಂಕಲ್ಪ ಆಡಿಟೋರಿಯಂನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವು “ಒಂದು ಆರೋಗ್ಯ, ಒಂದು ಭೂಮಿ” ಎಂಬ ಸಂದೇಶದ ಮೂಲಕ ಯೋಗದ ಮಹತ್ತ್ವವನ್ನು ಪ್ರಸಾರ ಮಾಡಲು ಮತ್ತು ಪ್ರೋತ್ಸಾಹಿಸಲು ಆಯೋಜಿಸಲಾಯಿತು.
ಕಾರ್ಯಕ್ರಮವು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆಯಾಯಿತು, ಇದನ್ನು ಮುಖ್ಯ ಅತಿಥಿಗಳು ಹಾಗೂ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಗೋವಿಂದ ಪ್ರಕಾಶ ಸಾಯ, ಕಾಲೇಜಿನ ಪ್ರಾಂಶುಪಾಲರು ಡಾ. ಗುರುರಾಜ ಎಮ್.ಪಿ ನೆರವೇರಿಸಿದರು.

ಮುಖ್ಯ ಅತಿಥಿಗಳಾದ ಯೋಗಾಚಾರ್ಯ ವಿಜಯ ಗಣೇಶ ಕೆ ನೆದರ್ಲ್ಯಾಂಡ್ಸ್ ನ ಭಾರತೀಯ ರಾಯಭಾರಿಯ ಪ್ರಖ್ಯಾತ ಯೋಗಗುರು, ಕಾರ್ಯಕ್ರಮವನ್ನು ಯೋಗಗೀತೆಯಿಂದ ಪ್ರಾರಂಭಿಸಿದರು.
ಅವರು ತಮ್ಮ ಭಾಷಣದಲ್ಲಿ ಯೋಗಾಭ್ಯಾಸದ ಮಹತ್ವವನ್ನು ವಿವರಿಸಿದರು. ಯೋಗ ಅಭ್ಯಾಸವು ನಮ್ಮ ಆತ್ಮ, ಮನಸ್ಸು ಮತ್ತು ದೇಹದ ಆರೋಗ್ಯವನ್ನು ಒಟ್ಟಾಗಿ ಉತ್ತಮಗೊಳಿಸುತ್ತದೆ. ಇಂದಿನ ಒತ್ತಡಪೂರ್ಣ ಜೀವನ ಶೈಲಿಯಲ್ಲಿ ಉಸಿರಾಟದ, ಹಾರ್ಮೋನಲ್ ಅಸಮತೋಲನವೂ ಸಂಭವಿಸಬಹುದು. ಸಾಮಾನ್ಯ ವ್ಯಾಯಾಮವು ನಮ್ಮ ಶರೀರಕ್ಕೆ ಮಾತ್ರ ಪ್ರಯೋಜನವಾಗುತ್ತದೆ . ಆದರೆ ಯೋಗಾಭ್ಯಾಸವು ಆಂತರಿಕ ಅಂಗಾಂಗಗಳಿಗೂ ಬಹುಮಟ್ಟಿಗೆ ಲಾಭದಾಯಕವಾಗುತ್ತದೆ ಎಂದು ಅವರು ಹೇಳಿದರು.
ಅವರು ಸೂರ್ಯ ನಮಸ್ಕಾರ ಮತ್ತು ಇತರ ಹಲವು ಆಸನಗಳ ಪ್ರಾತ್ಯಕ್ಷಿತೆ ಜೊತೆಗೆ, ಅವುಗಳು ಶರೀರದ ವಿಭಿನ್ನ ಅಂಗಾಂಗಗಳ ಮೇಲೆ ಯಾವ ರೀತಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ ಎಂಬುದರ ಮೇಲೆ ಬೆಳಕು ಹರಿಸಿದರು. ಯೋಗದ ನಿಯಮಿತ ಅಭ್ಯಾಸದಿಂದ ಹೃದಯಾಘಾತ ಮತ್ತು ಅಕಾಲಿಕ ಮರಣವನ್ನು ತಡೆಗಟ್ಟಬಹುದು ಎಂದು ಹೇಳಿದರು.
ಸ್ವಾಗತ ಮತ್ತು ಮುಖ್ಯ ಅತಿಥಿಗಳ ಪರಿಚಯವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ ಎಮ್.ಪಿ. ಅವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದ ಸಮರ್ಪಣೆಯನ್ನು ಬಿ ಫಾರ್ಮ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿ ಮಿಸ್ ಅನುಪ್ರಿಯಾ ಬಿ.ಎಲ್. ಅವರು ಮಾಡಿದರು.