ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯದಿಂದ ಯೋಗ ದಿನಾಚರಣೆ

0

ಪುತ್ತೂರು: ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ, ನೇತ್ರಾವತಿ ವಲಯ ಪುತ್ತೂರು ತಾಲೂಕು ವತಿಯಿಂದ ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಯೋಗ ದಿನಾಚರಣೆ ನಡೆಯಿತು.

ಭಜನೆ ಹಾಗೂ ಹನುಮಾನ್ ಚಾಲೀಸ್‌ನ್ನು ಸತೀಶ್ ಹಾಗೂ ತಂಡದವರು ನೆರವೇರಿಸಿದರು. ಕಂಬಳಬೆಟ್ಟು ಶಾಖೆಯ ಯಶೋಧ ಅಮೃತ ವಚನ ಹಾಗೂ ಶ್ರೀಮಹಾಲಿಂಗೇಶ್ವರ ಶಾಖೆಯ ಅರುಣ ಪಂಚಾಂಗ ಪಠಿಸಿದರು. ಬಳಿಕ ದೀಪ ಪ್ರಜ್ವಲನೆಯನ್ನು ಶ್ರೀಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಕೆಮ್ಮಿಂಜೆ ಅಧ್ಯಕ್ಷ ಕೇಶವ ಬೆದ್ರಾಳ ನೆರವೇರಿಸಿ ಯೋಗದಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ಸಂಚಾಲಕ ಕೃಷ್ಣಾನಂದಣ್ಣ, ಕಾರ್ಯಕ್ರಮದ ಸಂಚಾಲಕ ಹೇಮಚಂದ್ರ, ಸಹಸಂಚಾಲಕ ಜ್ಞಾನೇಶ ವಿಶ್ವಕರ್ಮ, ತಾಲೂಕು ಶಿಕ್ಷಣ ವಿಧಿ ಪ್ರಮುಖ ಸತೀಶ ಸುವರ್ಣ, ಸುಜಾತ, ಶುಭ ಶೆಟ್ಟಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ಮೊದಲನೇ ಅವಧಿಯಾದ ಮಾನಸಿಕ ಸಿದ್ಧತೆ, ಉಸಿರಾಟ ಪ್ರಕ್ರಿಯೆ, ಗಣಪತಿ ನಮಸ್ಕಾರ, ಷಣ್ಮುಖ ನಮಸ್ಕಾರ ಹಾಗೂ ವಿಷ್ಣು ನಮಸ್ಕಾರಗಳನ್ನು ಆರ್ಯಾಪು ಶಾಖೆಯ ಚಂದ್ರನಾಥ ನೆರವೇರಿಸಿದರು. ಆರ್ಯಾಪು ಶಾಖೆಯ ಶಿಕ್ಷಕಿ ಪುಷ್ಪಲತಾ, ಆರ್ಯಾಪು ಶಾಖೆಯ ದೀಪಕ್ ಪ್ರಾತ್ಯಕ್ಷಿಕೆಯಲ್ಲಿ ನಡೆಸಿದರು. ಎರಡನೇ ಅವಧಿ ಆಯುಷ್ ಪಠ್ಯಕ್ರಮ ಆಧಾರಿತ ಯೋಗಾಭ್ಯಾಸ, ಅಮೃತಾಸನ ಹಾಗೂ ಪ್ರಾಣಾಯಾಮ-ಧ್ಯಾನವನ್ನು ಸಂಪ್ಯ ಶಾಖೆಯ ಶಿಕ್ಷಕಿ ಲಕ್ಷ್ಮೀ ನೆರವೇರಿಸಿದರು, ಆರ್ಯಾಪು ಶಾಖೆಯ ಶಿಕ್ಷಕಿ ವಿನಯ, ಆರ್ಯಾಪು ಶಾಖೆಯ ಸತೀಶ್ ಹಾಗೂ ಸುಭದ್ರ ಶಾಖೆಯ ಅಶೋಕ, ಪಾಂಗಳಾಯಿ ಶಾಖೆಯ ಸತೀಶ್, ಸಂಪ್ಯ ಶಾಖೆಯ ಸುಮ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.

ಅಗ್ನಿಹೋತ್ರವನ್ನು ಸಂಪ್ಯ ಶಾಖೆಯ ಯೋಗಬಂಧು ಸೂರಪ್ಪ ದಂಪತಿ ನೆರವೇರಿಸಿದರು. ಯೋಗ ದಿನಾಚರಣೆ ಥೀಮ್‌ನ ಹೂವಿನ ರಂಗೋಲಿಯನ್ನು ಸುಭದ್ರ ಶಾಖೆಯ ದಿನೇಶ ವಿಶ್ವಕರ್ಮರವರ ನೇತೃತ್ವದಲ್ಲಿ ರಚಿಸಲಾಯಿತು. ಹೇಮಚಂದ್ರ ಕಲ್ಲೇಗ ವಂದಿಸಿದರು. ಆರ್ಯಾಪು ಶ್ರೀಚಕ್ರರಾಜರಾಜೇಶ್ವರೀ ಶಾಖೆಯ ಶುಭ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ತಾಲೂಕು ವ್ಯಾಪ್ತಿಗೆ ಒಳಪಟ್ಟ ಸುಮಾರು 600 ಮಿಕ್ಕಿ ಯೋಗಬಂಧುಗಳು ಭಾಗಹಿಸಿದ್ದರು.

LEAVE A REPLY

Please enter your comment!
Please enter your name here