ಪುತ್ತೂರು: ಷಣ್ಮುಖದೇವ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಜೂ.21ರಂದು ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಪರಿಸರ ಸ್ವಚ್ಛತಾ ಪ್ರೇರಕರೂ, ಉದ್ಯಮಿಗಳೂ ಶಾಲೆಯ ಅಭಿಮಾನಿ ಹರಿಪ್ರಸಾದ್ “ಯೋಗ, ಆರೋಗ್ಯ ನಮ್ಮ ಪರಂಪರೆಯ ಕುರಿತು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸುತ್ತಾ ಯೋಗಾಭ್ಯಾಸ ಇಂದಿಗೆ ಮಾತ್ರ ಸೀಮಿತವಾಗದೆ ನಿಮ್ಮ ಜೀವನದಲ್ಲಿ ಯಾವಾಗಲೂ ರೂಢಿಸಿಕೊಂಡು ಆರೋಗ್ಯಪೂರ್ಣ ಉತ್ತಮ ಪ್ರಜೆಗಳಾಗಿ” ಎಂದರು.
ದೈಹಿಕ ಶಿಕ್ಷಕ ಪ್ರಸಾದ್ ನೇತೃತ್ವದಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇದರ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಶಾಲೆಯ ಆಡಳಿತ ಮಂಡಳಿ ಯೋಗ ಮಾಡಿದರು.
ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಯೋಗದಿನದ ಪ್ರಸ್ತುತತೆಯನ್ನು ತಿಳಿಸಿ,ಸ್ವಾಗತಿಸಿದರು. ಶಿಕ್ಷಕರಾದ ಡಿ ಆರ್ ನಂಜುಂಡಪ್ಪ ವಂದಿಸಿದರು.ಮುಖ್ಯ ಶಿಕ್ಷಕಿ ಕೃಷ್ಣವೇಣಿ ನಿರೂಪಿಸಿದರು.