
ಪುತ್ತೂರು: ಇಲ್ಲಿನ ಉರ್ಲಾಂಡಿ ಬೈಪಾಸ್ ನಲ್ಲಿರುವ ಸುಶ್ರುತ ಆಯುರ್ವೇದ ಆಸ್ಪತ್ರೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರವಿಶಂಕರ್ ಪೆರುವಾಜೆ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಡಾ. ಜಯಶ್ರೀ ಪೆರುವಾಜೆ, ಕರ್ತವ್ಯ ನಿರತ ವೈದ್ಯರು ಮತ್ತು ಸಿಬ್ಬಂದಿ ಗಳು ಉಪಸ್ಥಿತಿ ಇದ್ದರು. ಯೋಗ ಶಿಕ್ಷಕಿ ಶ್ರೀಮತಿ ಯಶೊದ ಯೋಗ ನಡೆಸಿಕೊಟ್ಟರು.