ಈಶ್ವರಮಂಗಲದ ಕೆಮ್ಮತ್ತಡ್ಕದಲ್ಲಿ ಆನೆ ದಾಳಿ- ಕೃಷಿ ಹಾನಿ

0

ಈಶ್ವರಮಂಗಲ: ದಿನದಿಂದ ದಿನಕ್ಕೆಪುತ್ತೂರು, ಸುಳ್ಯ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗುತ್ತಿದ್ದು ಜೂ.21ರ ರಾತ್ರಿ ಈಶ್ವರಮಂಗಲದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೆಮ್ಮತಡ್ಕ ಪ್ರದೇಶದಲ್ಲಿ ಆನೆ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ನಾಶಗೈದ ಘಟನೆ ವರದಿಯಾಗಿದೆ.

ಕೆಮ್ಮತ್ತಡ್ಕ ಪ್ರದೇಶದ ಕೃಷಿಕರಾದ ಯೋಗೀಶ್‌ ಕೆಮ್ಮತ್ತಡ್ಕ, ಶಾಂತಪ್ಪ ಕೆಮ್ಮತಡ್ಕ, ರಿತನ್‌ ಕೆಮ್ಮತ್ತಡ್ಕ, ಶೇಷಪ್ಪ ಕೆಮ್ಮತ್ತಡ್ಕ, ಆನಂದ ಪೂಜಾರಿ, ಉಮೇಶ್ ಪೂಜಾರಿ, ಈಶ್ವರ ನಾಯ್ಕ ಎಂಬವರ ತೋಟಗಳಿಗೆ ಲಗ್ಗೆ ಇಟ್ಟ ಆನೆ ಅಲ್ಲಿನ ಬಾಳೆಗಿಡ, ಹಲಸು ಮರ, ಇನ್ನೀತರ ಕೃಷಿಯನ್ನು ನಾಶಮಾಡಿದೆ. ತೋಟದಲ್ಲಿ ಅಳವಡಿಸರುವ ಪೈಪ್‌ ಲೈನ್‌ ಗಳು ಆನೆಯ ತುಳಿತಕ್ಕೆ ನಜ್ಜು ಗುಜ್ಜಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here