ಪುತ್ತೂರು: ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈಶಿಷ್ಟ್ಯಪೂರ್ಣವಾಗಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರಾರಂಭದಲ್ಲಿ ಟಕ್ಸಸ್ ಬೆಂಗಳೂರು ಸಂಸ್ಥೆ ಇವರ ವತಿಯಿಂದ ಎಲ್ಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಲಾಯಿತು. ನಂತರ ಸಾಮೂಹಿಕವಾಗಿ ಯೋಗಾಸನ ನಡೆಯಿತು. ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಕೈಕಾರ ಶಾಲಾ ಮುಖ್ಯ ಗುರುಗಳಾದ ರಾಮಣ್ಣ ರೈ ಇವರು ಸರಳ ಯೋಗಸನ ಮಾಡಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸತ್ಯ ಸಾಯಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ದಯಾನಂದ್ ಅವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಟ ಕ್ಸಸ್ ಸಂಸ್ಥೆ ಇದರ ಅಧಿಕಾರಿಯಾದ ಪಲ್ಲವಿ, ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷೆ ಶೀಲಾವತಿ, ಗ್ರಾಮ ಪಂಚಾಯತ್ ಸದಸ್ಯೆ ರೇಖಾ ಯತೀಶ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಶಿಕಿರಣ್ ರೈ, ನಿವೃತ್ತ ಬ್ಯಾಂಕ್ ಅಧಿಕಾರಿ ತಿಮ್ಮಪ್ಪ ರೈ, ನಿವೃತ್ತ ಪೋಸ್ಟಲ್ ಅಧಿಕಾರಿ ಗಣೇಶ್ ರೈ , ಚಂದ್ರಹಾಸ ರೈ ಪನಡ್ಕ, ಪ್ರಜ್ವಲ್ ರೈ ತೊಟ್ಲ ಕಿರಣ್ ರೈ ಪುಂಡಿಕಾಯಿ, ವಿಶ್ವನಾಥ ಗೌಡ, ವಿಶ್ವನಾಥ ನಾಯ್ಕ ಸೇರಿದಂತೆ ಮಕ್ಕಳ ಪೋಷಕರು , ವಿದ್ಯಾರ್ಥಿಗಳು ಅಧ್ಯಾಪಕಿಯರಾದ ರಾಜೇಶ್ವರಿ , ಶೋಭಾ ಕುಮಾರಿ ವೇದಾಕ್ಷಿ, ಅಧ್ಯಾಪಕರಾದ ಸುರರಾಜ್, ಸಹಾಯಕಿ ಮೀನಾಕ್ಷಿ ಅಡುಗೆ ಸಿಬ್ಬಂದಿಗಳಾದ ಕುಸುಮ , ಗೀತಾ ಕ್ಷಿ ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಮುಖ್ಯ ಗುರುಗಳಾದ ರಾಮಣ್ಣ ರೈ ಸ್ವಾಗತಿಸಿ, ಸಹ ಶಿಕ್ಷಕ ಸುರರಾಜ್ ವಂದಿಸಿದರು.