ಪುತ್ತೂರು: ಉಪ್ಪಿನಂಗಡಿ ವೇದಶಂಕರ ನಗರ ಶ್ರೀರಾಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಜೂ.21ರಂದು ಆಚರಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆತ್ರಿ ಅಸೋಸಿಯೇಟ್ ಕೃಷ್ಣಕುಮಾರ್ ಆತ್ರಿಜಾಲು, ಸುನಿಲ್ ಬೇಕಲ್ ಮಂಗಳೂರು ಹಾಗೂ ಶಾಲಾ ಸಂಚಾಲಕ ಯು.ಜಿ ರಾಧಾ,ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು, ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯಗುರು ಉಷಾ.ಬಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.ಪ್ರಜ್ಞಾ ಯೋಗದ ಮಹತ್ವವನ್ನು ತಿಳಿಸಿದರು.ವಿದ್ಯಾರ್ಥಿ ನಾಯಕ ತುಷಾರ್ ಎಸ್ ದೇವಾಡಿಗ ಯೋಗ ಪ್ರಾತ್ಯಕ್ಷಿಕೆ ನಡೆಸಿ,ಮೋಕ್ಷ ಕಾರ್ಯಕ್ರಮ ನಿರ್ವಹಿಸಿದರು