7 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸುವ ಗುರಿ
ಪುತ್ತೂರು:ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ಜು.12ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.

ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ ಇದಾಗಿದ್ದು ಈ ಬಾರಿ 7 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿಯನ್ನು ಹೊಂದಲಾಗಿದೆ.ಹೆಚ್ಚಿನ ಪ್ರಕರಣ ಇತ್ಯರ್ಥ ಆಗಲು ಎಲ್ಲರ ಸಹಕಾರ ಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ, ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಧಿಶೆ ಪ್ರಕೃತಿ ಕಲ್ಯಾಣ್ಪುರ ಹೇಳಿದರು.
ಈ ಕುರಿತು ಈಗಾಗಲೇ ಪೂರ್ವ ಭಾವಿ ಸಭೆಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾಡಿದ್ದೇವೆ.ಹಣಕಾಸು ಸಂಸ್ಥೆಗಳಾದ ಬ್ಯಾಂಕ್, ಸೊಸೈಟಿ, ಪೊಲೀಸ್, ಆರ್.ಟಿ.ಒ, ನಗರಸಭೆ, ವಕೀಲರು, ತಹಸೀಲ್ದಾರ್, ಇನ್ಶ್ಯೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ.ಹಣಕಾಸು ಸಂಸ್ಥೆಗಳಿಗೆ ಬಡ್ಡಿ ದರದಲ್ಲಿ ರಿಯಾಯಿತಿ ನೀಡುವಂತೆ ಕೇಳಿದ್ದೇವೆ. ಸಾಲಗಾರರ ಮನವೊಲಿಸಿ ಆದಷ್ಟು ಬೇಗ ಪ್ರಕರಣಗಳನ್ನು ರಾಜಿ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದೇವೆ.ಇಂತಹ ರಾಜಿ ಸಂಧಾನದ ಮೂಲಕ ಹಣ ಮತ್ತು ಸಮಯದ ಉಳಿತಾಯ ಆಗುತ್ತದೆ, ಮಾನಸಿಕ ನೆಮ್ಮದಿ ಸಿಗುತ್ತದೆ.ತ್ವರಿತ ನ್ಯಾಯದಾನಕ್ಕೆ ಸಹಾಯವಾಗುತ್ತದೆ ಎಂದರು.
ಝೀರೋ ಶುಲ್ಕದೊಂದಿಗೆ ವ್ಯಾಜ್ಯಪೂರ್ವ ಪ್ರಕರಣ ದಾಖಲೆಗೆ ಅವಕಾಶ:
ಅಪಘಾತ ಪ್ರಕರಣ, ಮನೆ, ಇತರ ವ್ಯಾಜ್ಯಗಳು, ವೈವಾಹಿಕ ಹಾಗೂ ಕೌಟುಂಬಿಕ ವ್ಯಾಜ್ಯ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್ಗೆ ಸಂಬಂಧಿಸಿದ ಪ್ರಕರಣ, ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಗಳು, ವಿದ್ಯುತ್, ನೀರಿನ ಶುಲ್ಕ, ಭತ್ಯೆಗಳ ಪ್ರಕರಣಗಳಲ್ಲದೆ ವ್ಯಾಜ್ಯ ಪೂರ್ವ ಪ್ರಕರಣಗಳಿಗೂ ಅಂದರೆ, ಕೋರ್ಟಿಗೆ ಬರುವ ಮೊದಲೇ ಅದಾಲತ್ನಲ್ಲಿ ನೋಂದಾವಣೆ ಮಾಡುವ ವಿಚಾರ.ಇದರಲ್ಲಿ ಕೇಸು ಹಾಕುವವರಿಗೆ ಬಹಳ ಪ್ರಯೋಜನವಾಗಲಿದೆ.ಇದರಲ್ಲಿ ಯಾವುದೇ ರೀತಿ ಕೋರ್ಟ್ ಫೀಸ್ ಕಟ್ಟುವಂತಿಲ್ಲ.ಝೀರೋ ಶುಲ್ಕದೊಂದಿಗೆ ವ್ಯಾಜ್ಯಪೂರ್ವ ಪ್ರಕರಣ ದಾಖಲಿಸಬಹುದು.ಇಲ್ಲಿನ ತನಕ ಯಾವುದೇ ವ್ಯಾಜ್ಯಪೂರ್ವ ಪ್ರಕರಣ ದಾಖಲಾಗಿಲ್ಲ.ಈ ಕುರಿತು ಜನರಿಗೆ ಅರಿವು ಕೂಡಾ ಇಲ್ಲ.ಹಾಗಾಗಿ ನಾವೇ ಬ್ಯಾಂಕ್ಗಳಿಗೆ ಕರೆ ಮಾಡಿ ತಿಳಿಸಿದ್ದೇವೆ.ಆರ್ಟಿಒದಲ್ಲಿ ಸುಮಾರು 280 ಪ್ರಕರಣ ಇದೆ.ವಾಹನಗಳಿಗೆ ತೆರಿಗೆ ಸರಿಯಾಗಿ ಕಟ್ಟದೆ ಇದ್ದು ಅದರ ಮೇಲೆ ಪೆನಲ್ಟಿ ತುಂಬಾ ಆಗಿದೆ.ಕೆಲವೊಂದು ಪ್ರಕರಣಗಳಲ್ಲಿ ರೂ.50 ಲಕ್ಷದ ತನಕ ಪೆನಲ್ಟಿ ಇದ್ದಿರುವುದು ಇದೆ ಎಂದು ನ್ಯಾಯಾಽಶರು ತಿಳಿಸಿದರು.
ಕಕ್ಷಿಗಾರರಿಗೆ ತ್ವರಿತಗತಿಯಲ್ಲಿ ನ್ಯಾಯ:
ಹಣ ವಸೂಲಾತಿ, ಭೂಸ್ವಾಧಿನ ಪ್ರಕರಣ ಸಂಬಂಽಸಿದಂತೆ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಲಿದೆ.ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಕಕ್ಷಿಗಾರರು ರಾಜಿ ಮಾಡಿಕೊಳ್ಳಲು ಅವಕಾಶಗಳಿವೆ.ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕ ವಾಪಸ್ ಪಡೆಯಬಹುದಾಗಿದೆ.ಲೋಕ ಅದಾಲತ್ನಲ್ಲಿ ರಾಜಿ ಮಾಡಿಕೊಂಡ ಪ್ರಕರಣಗಳಿಗೆ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ.ತಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನ್ಯಾಯವಾದಿಗಳ ಸಂಘ, ತಾಲೂಕು ಉಚಿತ ಕಾನೂನು ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದು ಎಂದು ನ್ಯಾಯಾಧಿಶರು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಕಾನೂನು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಪ್ರಧಾನ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಽಶ ಶಿವಣ್ಣ ಹೆಚ್.ಆರ್, ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧಿಶ ಯೋಗೇಂದ್ರ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ಜಿ ಉಪಸ್ಥಿತರಿದ್ದರು.
ಕಸ ವಿಲೇವಾರಿ ವಾಹನದಲ್ಲೂ ಅದಾಲತ್ ಅರಿವು ಆಡಿಯೋ
ಜನರಿಗೆ ಲೋಕ್ ಅದಾಲತ್ ಬಗ್ಗೆ ತಿಳಿಯುವಂತೆ ಮಾಡಲು ಸ್ಥಳೀಯಾಡಳಿತದ ಕಸ ವಿಲೇವಾರಿ ವಾಹನಕ್ಕೆ ಒಂದು ಆಡಿಯೋ ತುಣುಕನ್ನು ನೀಡಲಾಗಿದ್ದು, ಈ ಮೂಲಕ ಪ್ರತಿ ಮನೆಗೆ ಅದಾಲತ್ ಮಾಹಿತಿ ತಲುಪಿಸುವ ಪ್ರಯತ್ನ ಮಾಡಲಾಗಿದೆ.ಅದಾಲತ್ತಿನಲ್ಲಿ ಜನರು ಹೆಚ್ಚು ಭಾಗವಹಿಸಿದಾಗ ನ್ಯಾಯಾಲಯದ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ ಎಂದು ನ್ಯಾಯಾಧಿಶರು ತಿಳಿಸಿದರು.