ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಕೊರ್ಟ್ರಸ್ತೆಯ ಮುಳಿಯ ಜ್ಯುವೆಲ್ಸ್ನಲ್ಲಿ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ‘ಚಿನ್ನದಂತೆ ಅಪ್ಪ-ನನ್ನ ಅಪ್ಪ’ ಎಂಬ ವಿನೂತನ ಅನುಬಂಧ ಕಾರ್ಯಕ್ರಮ ಜೂ.22ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಠಲ ನಾಯಕ್ ಕಲ್ಲಡ್ಕ ಮಾತನಾಡಿ, ಕುಟುಂಬದಲ್ಲಿ ತಾಳ್ಮೆಯ ವ್ಯಕ್ತಿಯೆಂದರೆ ಅಪ್ಪ. ತ್ಯಾಗ ಜೀವಿಯಾಗಿರುವ ಅಪ್ಪನ ಬಗ್ಗೆ ಅರಿತುಕೊಳ್ಳಬೇಕು. ಎಟಿಎಂ ಮಿಷನ್ನಂತೆ ನೋಡಬಾರದು. ಕುಟುಂಬದಲ್ಲಿ ಮಾನವೀಯ ಸಂಬಂಧಗಳು ಉತ್ತಮವಾಗಿರಬೇಕು. ಮಕ್ಕಳು ಅದನ್ನು ಅನುಕರಿಸುತ್ತಿದ್ದು ಸಂಬಂಧಗಳು ದೂರವಾದರೆ ಮಕ್ಕಳು ದಾರಿ ತಪ್ಪಲು ಸಾಧ್ಯತೆಯಿದೆ. ನೆಮ್ಮದಿಯ ಜೀವನಕ್ಕೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳನ್ನು ಕಲಿತುಕೊಳ್ಳುವುದಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು. ದಾಂಪತ್ಯ ಜೀವನದ ಕಡೆಗೆ ಲಕ್ಷ್ಯ ಕೊಟ್ಟಾಗ ಅಪ್ಪಂದಿರ ದಿನಕ್ಕೆ ಅರ್ಥ ಬರಲಿದೆ. ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಒತ್ತಡದ ಜೀವನದಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವ ಹೊಣೆ ಪೋಷಕರಲ್ಲಿದೆ ಎಂದರು.

ಮುಳಿಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಕೇವಲ ಅಮ್ಮಂದಿರ ದಿನ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅಪ್ಪಂದಿರ ದಿನವೂ ಆಚರಣೆಯಾಗುತ್ತಿದೆ. ಮಳಿಗೆಯಲ್ಲಿ ಚಿನ್ನಾಭರಣಗಳನ್ನು ಮಹಿಳೆಯರು ಖರೀದಿಸಿದರೂ ಹಣ ಪಾವತಿಸುವವರು ಅಪ್ಪಂದಿರು. ಕುಟುಂಬದಲ್ಲಿ ಕಾಣದ ಕೈಗಳಂತಿರುವ ಅಪ್ಪನ ಪಾತ್ರ ಬಹುಮುಖ್ಯವಾಗಿದ್ದು ಅವರನ್ನು ಸಮಾಜದಲ್ಲಿ ಮುಂದೆ ತರುವ ಉದ್ದೇಶದಿಂದ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಅಶ್ವಿನಿ ಕೃಷ್ಣ ಮಾತನಾಡಿ, ನಮ್ಮ ಬೆಳವಣಿಗೆಯಲ್ಲಿ ಕಾಣದ ಶಕ್ತಿಯಾಗಿರುವ ಅಪ್ಪನ ಸ್ಥಾನ ವೈಶಿಷ್ಠ್ಯವಾದುದು. ವಿಶಾಲ ಪ್ರೀತಿಯನ್ನು ಹೊಂದಿರುವ ಅಪ್ಪ ನಿರಂತರ ಗುರುವಾಗಿರುತ್ತಾನೆ. ನಾವು ಏನೇ ಕೇಳಿದರೂ ಯೋಚಿಸಿ ಸೂಕ್ತವಾದುದನ್ನೇ ನೀಡುವರಾಗಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಸ್ವಾಭಿಮಾನದ ಜೀವನಕ್ಕೆ ಪ್ರೇರಣೆಯಾಗಿರುವ ಅಪ್ಪನ ಸ್ಥಾನದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಮುಳಿಯ ಜ್ಯುವೆಲ್ಸ್ ನವೀಕರಣಗೊಂಡ ನಂತರ ಸಣ್ಣ ಸ್ಪರ್ಧೆಯ ರೂಪದಲ್ಲಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಶೋ ರೂಂ ವ್ಯವಸ್ಥಾಪಕ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಿತಾ ಪ್ರಾರ್ಥಿಸಿದರು. ವಿನೋದ್ ಆಚಾರ್ಯ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ, ನಯನಾ, ಪೂಜಿತಾ, ಪುಷ್ಪರಾಜ್ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಅದೃಷ್ಠಶಾಲಿ ವ್ಯಕ್ತಿಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ಅಪ್ಪ-ಮಕ್ಕಳ ಸೆಲೀ ಪಾಯಿಂಟ್ ಮಾಡಿದ್ದು ಅದರಲ್ಲಿ ಭಾವಚಿತ್ರವನ್ನು ತೆಗೆಯಲಾಯಿತು. ಮಕ್ಕಳು ಹಾಗೂ ಪೋಷಕರಿಗೆ ವಿವಿಧ ಮನೊರಂಜನಾತ್ಮಕ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಮಾರು ೨೫೦ಕ್ಕೂ ಅಽಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಕ್ಕಳು ಜೀವನದಲ್ಲಿ ಗೆದ್ದು ಚಿನ್ನ ತರುವ ಸಾಧಕರಾಗಬೇಕೇ ಹೊರತು ಕದ್ದು ತರುವ ಮಕ್ಕಳಾಗಬಾರದು ಎಂಬ ಪ್ರೇರಣೆ ನೀಡುವ ಉದ್ದೇಶದಿಂದ ಮುಳಿಯ ಜ್ಯುವೆಲ್ಸ್ ಅಪ್ಪಂದಿರ ದಿನ ಆಚರಿಸುತ್ತಿದೆ. ಚಿನ್ನದಂತ ವಿಷಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಪ್ಪ-ಮಕ್ಕಳನ್ನು ಒಟ್ಟು ಸೇರಿಸಿ ಅಪ್ಪಂದಿರ ದಿನದ ಮಹತ್ವವನ್ನು ತಿಳಿಸಿದ್ದಾರೆ. ಅಪ್ಪ-ಅಮ್ಮನಿಗೆ ಚಿನ್ನದಂತ ಮಕ್ಕಳಾಗಿ ಬೆಳೆದು ಮುಳಿಯ ಜ್ಯುವೆಲ್ಸ್ನಿಂದ ಚಿನ್ನ ತೆಗೆದುಕೊಡುವಂತಾಗಲಿ.
-ವಿಠಲ ನಾಯಕ್ ಕಲ್ಲಡ್ಕ.