ಎಂಸಿಸಿ ಬ್ಯಾಂಕ್ ನಿಂದ ಮಾಯ್ ದೆ ದೇವುಸ್ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ವಿತರಣಾ ಕಾರ್ಯಕ್ರಮ

0


ಪುತ್ತೂರು: ಮಂಗಳೂರು ಕ್ಯಾಥೋಲಿಕ್ ಕೊ -ಆಪರೇಟಿವ್ ಬ್ಯಾಂಕ್ ಮಂಗಳೂರು ದ.ಕ (Mcc bank) ಇಲ್ಲಿ ಮೀಸಲಿಟ್ಟ ದಾನ ನಿಧಿಯಿಂದ ಮಾಯ್ ದೆ ದೇವುಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇಲ್ಲಿನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುವ ಕೊಡೆಗಳ ವಿತರಣಾ ಕಾರ್ಯಕ್ರಮವು ಮಾಯ್ ದೆ ದೇವುಸ್ ಚರ್ಚ್ ನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರು ಹಾಗೂ ಮಾಯ್ ದೆ ದೇವುಸ್ ಚರ್ಚ್ ನ ಧರ್ಮಗುರುಗಳಾದ ಲಾರೆನ್ಸ್ ಮಸ್ಕರೇನ್ಹಸ್ ವಹಿಸಿಕೊಂಡರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರು ಎಂಸಿಸಿ ಬ್ಯಾಂಕ್ ನ ಮ್ಯಾನೇಜರ್ ಆಗಿರುವ ಐರಿನ್ ಡಿಸೋಜಾ, ಎಂಸಿಸಿ ಬ್ಯಾಂಕ್ ನ ನಿರ್ದೇಶಕರಾದ ಜೆ. ಪಿ ರೋಡ್ರಿಗಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ತಾ, ಮಾಯ್ ದೆ ದೇವುಸ್ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್ ಡಿಸೋಜಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಯ ಬಳಿಕ ಎಂಸಿಸಿ ಬ್ಯಾಂಕ್ ನ ನಿರ್ದೇಶಕರಾದ ಜೆ. ಪಿ ರೋಡ್ರಿಗಸ್ ರವರು ಪ್ರಾಸ್ತವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ನಂತರ ಸಾಂಕೇತಿಕವಾಗಿ ವೇದಿಕೆಯ ಮೇಲಿದ್ದ ಗಣ್ಯರಿಂದ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ ಎಂಸಿಸಿ ಬ್ಯಾಂಕ್ ನ ಮ್ಯಾನೇಜರ್ ಆಗಿರುವ ಐರಿನ್ ಡಿಸೋಜಾ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಎಂಸಿಸಿ ಬ್ಯಾಂಕ್ ವತಿಯಿಂದ ಬಡ ಕುಟುಂಬದ125 ಮಕ್ಕಳಿಗೆ ಕೊಡೆ ನೀಡಿ ಸಹಾಯ ಮಾಡಿದ್ದೇವೆ ಆದರೆ ಮುಂದಿನ ವರ್ಷದಲ್ಲಿ ಕೂಡ ಮಕ್ಕಳಿಗೆ ಸಹಾಯ ಮಾಡುವ ಭರವಸೆ ನೀಡಿ , ವಿದ್ಯಾರ್ಥಿಗಳ ಹೆತ್ತವರು ಎಂ.ಸಿ.ಸಿ.ಬ್ಯಾಂಕ್ ಲ್ಲಿ ಖಾತೆ ತೆರೆದು ಸಹಕರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಮಾಯ್ ದೆ ದೇವುಸ್ ಚರ್ಚ್ ನ ಸಂಚಾಲಕರಾಗಿರುವ ಪ್ರಧಾನ ಧರ್ಮಗುರುಗಳಾದ ಲಾರೆನ್ಸ್ ಮಸ್ಕರೇನ್ಹಸ್ ರವರು ಮಾತನಾಡಿ ಎಂಸಿಸಿ ಬ್ಯಾಂಕಿನವರು ವಿದ್ಯಾರ್ಥಿಗಳಿಗೆ ಮಾಡುವ ಒಳ್ಳೆಯ ಕಾರ್ಯಕ್ರಮಗಳು ಹೀಗೆ ಮುಂದುವರಿಯಲಿ, ಇನ್ನಷ್ಟು ಮಕ್ಕಳಿಗೆ ಸಹಾಯ ದೊರೆಯುವಂತಾಗಲಿ ಎಂದು ಆಶೀರ್ವದಿಸಿದರು. ಮಾಯ್ ದೆ ದೇವುಸ್ ಶಾಲೆಯ ಮುಖ್ಯ ಶಿಕ್ಷಕಿಯವರಾದ ಜಾನೆಟ್ ಡಿಸೋಜಾರವರು ವಂದಿಸಿದರು. ಶಿಕ್ಷಕಿ ಜೋಯ್ಸ್ ಸಿಕ್ವೆರಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here