ಪಡುಮಲೆ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ  – ಅಧ್ಯಕ್ಷರಾಗಿ ವಾಣಿಶ್ರೀ ಪಡುಮಲೆ, ಕಾರ್ಯದರ್ಶಿ ಭಾರತಿ ರೈ ಆಯ್ಕೆ

0

ಬಡಗನ್ನೂರು: ಪಡುಮಲೆ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ ಜೂ 21 ರಂದು ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಕಟ್ಟಾವು, ಅರ್ಚಕರಾದ ಮಹಾಲಿಂಗ ಭಟ್, ವ್ಯವಸ್ಥಾಪನಾ ಸಮಿತಿಯ ಗೌರವ ಸದಸ್ಯರಾದ ಪುರಂದರ ರೈ ಕುದ್ಕಾಡಿ, ಉದಯ ಕುಮಾರ್ ಪಡುಮಲೆ, ಶಂಕರಿ ಪಟ್ಟೆ, ಶ್ರೀಮತಿ ಕನ್ನಡ್ಕ, ಮತ್ತು ಸಿಬ್ಬಂದಿಗಳಾದ ಪುರಂದರ ರೈ ಸೇನೆರೆಮಜಲು, ಶಿವಾನಂದ ಆಚಾರಿ ಮೈಂದನಡ್ಕ ಇವರುಗಳ ಉಪಸ್ಥಿತಿಯಲ್ಲಿ ನಡೆಯಿತು. 

ಸಮಿತಿ ರಚನೆ
ಸಮಿತಿಯ ಗೌರವಾಧ್ಯಕ್ಷರಾಗಿ ವೀಣಾ ಭಟ್ ಚಂದುಕೂಡ್ಲು, ಅಧ್ಯಕ್ಷರಾಗಿ ವಾಣಿಶ್ರೀ ಪಡುಮಲೆ, ಉಪಾಧ್ಯಕ್ಷರಾಗಿ ಸುಲೋಚನಾ ನೇರ್ಲಂಪಾಡಿ, ಕಾರ್ಯದರ್ಶಿಯಾಗಿ ಭಾರತಿ ರೈ ಕುದ್ಕಾಡಿ, ಜೊತೆ ಕಾರ್ಯದರ್ಶಿಯಾಗಿ ವಿದ್ಯಾಶ್ರೀ ಎಸ್ (ಶ್ರೀಶಾವಾಸವಿ ತುಳುನಾಡ್), ಕೋಶಾಧಿಕಾರಿಯಾಗಿ ರಮಾಕಾಂತಿ ರೈ ಬೋಳಂಕೂಡ್ಲು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಶಂಕರಿ ಪಟ್ಟೆ, ಶ್ರೀಮತಿ ಕೆ ಕನ್ನಡ್ಕ, ಸುಧಾ ಎಸ್ ರೈ ಕಟ್ಟಾವು, ಉದಯಲಕ್ಷ್ಮೀ ಭಟ್ ಮೈಂದನಡ್ಕ ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ರೇಖಾ ನಾಗರಾಜ್ ಪಟ್ಟೆ, ಯಶೋಧಾ ಬಡಕ್ಕಾಯೂರು, ವಿನೋದಾ ರೈ ಸೇನೆರೆಮಜಲು, ಸುಶೀಲಾ ಕನ್ನಡ್ಕ, ಸಾವಿತ್ರಿ ಪೆರಿಗೇರಿ, ಸುನೀತಾ ರೈ ಮೇಗಿನಮನೆ, ಸುಜಾತಾ ಪಾಟಾಳಿ ಸ್ವರ್ಣಗಿರಿ, ಲತಾ ಪ್ರಸಾದ್ ಪದಡ್ಕ, ಶಶಿಕಲಾ ಅನಿಲ್, ಸಹಸಂಚಲಕರಾಗಿ ಶಾಂತಾ ಭಟ್ ಸಣಂಗೋಲು, ಜಯಶೀಲ ಪೆರಿಗೇರಿ, ವಿಜಯಲಕ್ಷ್ಮೀ ನಾಯಕ್ ಪಡುಮಲೆ, ಪ್ರೇಮಾ ತಿಮ್ಮಪ್ಪ ಪಾಟಾಳಿ ಮೈಂದನಡ್ಕ, ಸೇಸಮ್ಮ ಪದಡ್ಕ, ವಿನಯಲಕ್ಷ್ಮೀ ನಾಯಕ್ ಕೊೖಲ, ಮೋಹಿನಿ ರೈ ದೊಡ್ಡಡ್ಕ, ವಿಮಲ ತಲೆಂಜಿ, ಹೇಮಾ ಸಿ ಎಚ್ ತಲೆಂಜಿ, ಜಯಶೀಲ ಶ್ರೀನಿವಾಸ್ ಪೆರಿಗೇರಿ, ವಿಜಯಲಕ್ಷ್ಮಿ ಮೈಂದನಡ್ಕ, ಲತಾ ಕಟ್ಟಾವು, ದಿವ್ಯ ಕೆ, ರೇಖಾ ಮೈಂದನಡ್ಕ, ಸುಮಿತ್ರಾ ಅಣಿಲೆ, ಹೇಮಲತಾ ಅಣಿಲೆ, ಪ್ರೇಮಲತಾ ಗಣೇಶ್ ಅಣಿಲೆ, ನಿರ್ಮಲ ಬಡಕ್ಕಾಯೂರು, ಯಶೋಧಾ ಬಡಕ್ಕಾಯೂರು ಇವರನ್ನು ಆಯ್ಕೆ ಮಾಡಲಾಯಿತು.

ದೇವಾಲಯದ ವ್ಯವಸ್ಥಾಪನಾ ಸಮಿತಿಯ ಗೌರವ ಸದಸ್ಯರಾದ ಶಂಕರಿ ಪಟ್ಟೆ ಸ್ವಾಗತಿಸಿ, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯದರ್ಶಿ ಭಾರತಿ ರೈ ಕುದ್ಕಾಡಿ ವಂದಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಕಟ್ಟಾವು ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.

LEAVE A REPLY

Please enter your comment!
Please enter your name here