ಹಿರೇಬಂಡಾಡಿ: ಬಿಜೆಪಿ ವತಿಯಿಂದ ಪ್ರತಿಭಟನೆ

0

ಪುತ್ತೂರು: ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಹಿರೇಬಂಡಾಡಿ ಗ್ರಾಮಪಂಚಾಯತಿನ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.

ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಹಮ್ಮಬ್ಬ ಸವ್ಕತ್ ಅಲಿ ಮಾಡಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ್ ಜೈನ್ ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಹೇಮಾವತಿ ಧನ್ಯವಾದ ಸಮರ್ಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಾಂಭವಿ, ಸಹಕಾರಿ ಸಂಘ ಉಪ್ಪಿನಂಗಡಿ ಇದರ ಉಪಾಧ್ಯಕ್ಷರಾದ ದಯಾನಂದ ಸರೋಳಿ, ಹಿರೇಬಂಡಾಡಿ ಗ್ರಾಮದ ಶಕ್ತಿ ಕೇಂದ್ರ ಅಧ್ಯಕ್ಷರಾದ ನಿತಿನ್ ತಾರಿತ್ತಾಡಿ, ಹೇಮಾವತಿ, ನಾರಾಯಣ, ಹೇಮಂತ್ ಮೈಥಳಿಕೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವನಾಥ ಕೆಮ್ಮಟೆ ಹಾಗೂ ಬಿಜೆಪಿ ಕಾರ್ಯಕರ್ತರಾದ ನವೀನ್ ಕುಬಲ, ನೀಲಯ್ಯ ಸರೋಳಿ ಆದಿರಾಜ ಸಂತಿತಡ್ಡ, ಜನಾರ್ದನ ಕನ್ಯಾನ, ಚಂದ್ರಶೇಖರ ಕುಲಮಗೆರು, ಜನಾರ್ದನ ಅನತಿಮಾರು, ಧನಂಜಯ ಮೂಡಿಪು, ರವೀಂದ್ರ ರೈ ಮುರದಮೇಲು, ರಂಜಿತ್ ಕೆಮ್ಮರ ಗುತ್ತು, ಲಕ್ಷ್ಮೀಶ ನಿಡೆಂಕಿ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here