ಶಾಲಾ ನಾಯಕನಾಗಿ ದೀಪಕ್ ಪಿ. ಎಸ್, ಉಪನಾಯಕನಾಗಿ ಪ್ರಜೀಶ್ ಆಯ್ಕೆ
ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆಯ 2025-2026 ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣಾ ಪ್ರಕ್ರಿಯೆಯ ಮೂಲಕ ನಡೆಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ದೀಪಕ್ ಪಿ ಎಸ್ ಹಾಗೂ ಉಪನಾಯಕನಾಗಿ ಪ್ರಜೀಶ್ ಬಹುಮತದಿಂದ ಆಯ್ಕೆಗೊಂಡರು.

ಸಭಾಪತಿ ದೀಪ್ತಿ ಲಕ್ಷ್ಮಿ(10ನೇ) ಉಪಸಭಾಪತಿಯಾಗಿ ಅಮನ್ ರೈ (9ನೇ),ಸಾಂಸ್ಕೃತಿಕ ಮಂತ್ರಿಯಾಗಿ ಸಿಂಚನ ಎಸ್ (10ನೇ), ಉಪಸಾಂಸ್ಕೃತಿಕ ಮಂತ್ರಿ ದೀಕ್ಷಿತ್ ಒ (9ನೇ) ಆರೋಗ್ಯ ಮಂತ್ರಿ ಯಾಗಿ ಖದೀಜತ್ ಶಾಹಿದ (10ನೇ) ಉಪಆರೋಗ್ಯ ಮಂತ್ರಿಯಾಗಿ ಫಾತಿಮತ್ ನಾಸಿಫ(10ನೇ), ಸ್ವಚ್ಛತಾ ಮಂತ್ರಿ ಸ್ವಸ್ತಿಕ (10ನೇ), ಉಪಸ್ವಚ್ಛತಾ ಮಂತ್ರಿಯಾಗಿ ಭವಿತ್ ರಾಜ್ ಬಿ, ಕ್ರೀಡಾಮಂತ್ರಿಯಾಗಿ ಜಿತೇಶ್ (10ನೇ), ಉಪಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ಮಿದ್ ಲಾಜ್(9), ವಾಚನಾಲಯ ಮಂತ್ರಿಯಾಗಿ ರಚನಾ ಎಸ್ (10ನೇ),ಉಪ ವಾಚನಾಲಯ ಮಂತ್ರಿಯಾಗಿ ಚೈತನ್ಯಾ ಡಿ (9ನೇ), ಶಿಸ್ತು ಮಂತ್ರಿಯಾಗಿ ಸಿಂಚನ ಎ (10ನೇ), ಉಪಶಿಸ್ತು ಮಂತ್ರಿಯಾಗಿ ಎಂ ಕಲಂದರ್ ಶೀಜನ್ (9ನೇ), ನೀರಾವರಿ ಮಂತ್ರಿಯಾಗಿ ಮುಹಮ್ಮದ್ ಬಿಲಾಲ್ (10ನೇ),ಉಪ ನೀರಾವರಿ ಮಂತ್ರಿಯಾಗಿ ದೀಪಕ್ (9ನೇ), ಕೃಷಿ ಮಂತ್ರಿಯಾಗಿ ಶ್ರೀನಿಧಿ(10ನೇ), ಉಪ ಕೃಷಿ ಮಂತ್ರಿಯಾಗಿ ಪ್ರಣಮ್ (10ನೇ), ವಿರೋಧ ಪಕ್ಷದ ನಾಯಕಿಯಾಗಿ ಫಾತಿಮತ್ ಮುಫೀದ(10ನೇ), ವಿರೋಧ ಪಕ್ಷದ ಉಪನಾಯಕಿಯಾಗಿ ಲಾವಣ್ಯ ಕೆ (10ನೇ) ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯ ನೋಡಲ್ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ನಿರ್ಮಲ ಕೆ ಕಾರ್ಯನಿರ್ವಹಿಸಿದರು. ಮುಖ್ಯ ಶಿಕ್ಷಕಿ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿ ವಿನುತ ಕುಮಾರಿ ಬಿ ಪ್ರಮಾಣ ವಚನ ಬೋಧಿಸಿದರು. ಸಹ ಶಿಕ್ಷಕರು ಸಹಕರಿಸಿದರು.