ಪುತ್ತೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳ ಜನ್ಮ ದಿನೋತ್ಸವ, ಸೇವಾ ಸಂಭ್ರಮ ಗ್ರಾಮೋತ್ಸವ ಹಾಗೂ ರಜತ ತುಲಾಭಾರ ಸೇವೆ ಕಾರ್ಯ ಹಾಗೂ ಸಮಿತಿ ರಚನೆಯ ಬಗ್ಗೆ ಪೂರ್ವಭಾವಿ ಸಭೆಯು ಜೂ.23 ರಂದು ಹೊಟೇಲ್ ಶ್ರೀ ಲಕ್ಷ್ಮಿ ಇಲ್ಲಿ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೊಂಡಾರವರ ಅಧ್ಯಕ್ಷತೆಯಲ್ಲಿ ಜರುಗಿತು.
ಗ್ರಾಮವಿಕಾಸ ಕೇಂದ್ರದ ಸಂಪರ್ಕಾಧಿಕಾರಿ ಮಹಾಂತೇಶ ಭಂಡಾರಿ ಶ್ರೀ ಕ್ಷೇತ್ರದಲ್ಲಿ ನಡೆಸಲ್ಪಡುವ ಕಾರ್ಯಕ್ರಮಗಳ ಬಗ್ಗೆ ಹಾಗೂ ಶ್ರೀಗಳಿಗೆ ರಜತ ತುಲಾಭಾರ ಸೇವಾ ಕಾರ್ಯ ನೆರವೇರಿಸೋ ಬಗ್ಗೆ ಮಾಹಿತಿ ನೀಡಿ , ಸಹಕಾರ ಕೋರಿದರು.
ಶ್ರೀಧರ್ ಕೆ ಶೆಟ್ಟಿ ಗುಬ್ಬಿ ಮೇಗಿನಗುತ್ತು ಮಾತನಾಡಿ , ಸುಮಾರು 40 ವರ್ಷಗಳಿಂದ ಸಂಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಈ ಬಾರಿ ಶ್ರೀಗಳ ಜನ್ಮದಿನೋತ್ಸವದಂದು ರಜತ ತುಲಾಭಾರ ಸೇವೆ ಹಮ್ಮಿಕೊಂಡಿದ್ದೇವೆ. ಒಡಿಯೂರು ವಿವಿಧ ಸಂಘಟನೆಯ ಬಂಧುಗಳೆಲ್ಲಾ ಸೇರಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡೋಣ. ಕೆಲ ಸಮಯವನ್ನು ಅದಕ್ಕಾಗಿಯೇ ನಾನು ನಿಮ್ಮೊಡನೆ ಬರಲು ಮೀಸಲಿಡುತ್ತೇನೆ ಎಂದರು. ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೊಂಡಾ ಮಾತನಾಡಿ, ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಬಳಗದ ವಿವಿಧ ಸಂಘಟನೆಯು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುವುದು ಹಾಗೂ ನೂತನ ಸಮಿತಿ ರಚನೆ ಬಗ್ಗೆ ತಿಳಿಸಿದರು. ಶ್ರೀಗಳ ರಜತ ತುಲಾಭಾರ ಕಾರ್ಯಕ್ಕೆ 1 ಕೆ.ಜಿ ಬೆಳ್ಳಿಯನ್ನು ಕೂಡ ಸೆವಾ ಬಳಗದ ವತಿಯಿಂದ ನೀಡುವ ಕಾರ್ಯವಾಗಲಿದೆಯೆಂದು ಘೋಷಣೆ ಮಾಡಿದರು.
ಒಡಿಯೂರು ವಿವಿದ್ಧೋದ್ದೇಶ ಸಹಕಾರಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಕೂಡ ವಿವಿಧ ಮಾಹಿತಿ ಕೊಟ್ಟರು. ಗ್ರಾಮ ವಿಕಾಸ ಯೋಜನಾ ಮೇಲ್ವಿಚಾರಕಿ ಸವಿತಾ ರೈ, ಸಂಯೋಜಕಿ ಶಶಿ ಡಿ , ಸೇವಾದೀಕ್ಷೆ ಸುಜಾತ ಬಿ ,ಪ್ರಜ್ವಲ್ ರೈ ತೋಟ್ಲ , ಜಯಪ್ರಕಾಶ್ ರೈ , ಸುದರ್ಶನ್ ರೈ ನೀರ್ಪಾಡಿ, ವಿ.ಕೆ.ಶೆಟ್ಟಿ , ಲೀನಾ ಡಿ ಸೋಜಾ ,ರಾಜೇಶ್ವರಿ ,ವಿಶ್ವನಾಥ ಶೆಟ್ಟಿ ಸಹಿತ ಒಡಿಯೂರು ಬಳಗದ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು. ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಭವಾನಿ ಶಂಕರ ಶೆಟ್ಟಿ ವಂದಿಸಿದರು.