ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಹದಿನೈದು ದಿನಗಳ ಯೋಗ ತರಬೇತಿ ಶಿಬಿರವು ಜೂ.23ರಂದು ಉದ್ಘಾಟನೆಗೊಂಡಿತು.
ಜೂ.23 ರಿಂದ ಜು.7 ರವರೆಗೆ ನಡೆಯಲಿರುವ ಈ ಯೋಗ ಶಿಬಿರವನ್ನು ಎಸ್ಪಿವೈಎಸ್ಎಸ್ ಜಿಲ್ಲಾ ಮಕ್ಕಳ ಶಿಕ್ಷಣ ಪ್ರಮುಖ್ ಪ್ರಸಾದ್ ಕುಲಾಲ್ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಯೋಗಾಭ್ಯಾಸ ನಿತ್ಯದ ಕಾರ್ಯಚಟುವಟಿಕೆ ನಡೆಯಬೇಕೆಂದರು.

ವೇದಿಕೆಯಲ್ಲಿ ಎಸ್ಪಿವೈಎಸ್ಎಸ್ ಜಿಲ್ಲಾ ಸಂಚಾಲಕ ಆನಂದ ಕುಂಟಿನಿ , ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ನಿರ್ದೇಶಕ ವಸಂತ ಪಿಜಕ್ಕಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ್ ಕಲ್ಲಳಿಕೆ, ಸಂಘದ ಸಿಬ್ಬಂದಿ ಶಶಿಧರ ಹೆಗ್ಡೆ, ಪ್ರವೀಣ ಆಳ್ವ, ರವೀಶ ಎಚ್.ಟಿ., ಉಮೇಶ, ಗಾಯತ್ರಿ, ಚೇತನಾ, ಚಂದ್ರಶೇಖರ ಡಿ.ಎಚ್., ಅಶೋಕ್ ಶೆಟ್ಟಿ ಪಿ., ದೇವರಾಜ್, ವಸಂತ ಗೌಡ ಜಿ., ವಿಜಯ ಗೌಡ ಮೊದಲಾದವರು ಭಾಗವಹಿಸಿದ್ದರು. ಸಂಘದ ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ ಎಚ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.