ಸುಳ್ಯಪದವು: ಹಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

0

ಬಡಗನ್ಸೂರು: ಸುಳ್ಯಪದವು ಬಾಲಾಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾ.ಶಾಲಾ 2025-26 ನೇ ಸಾಲಿನ ಮಂತ್ರಿ ಮಂಡಲವನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.
ಶಾಲಾ ನಾಯಕನಾಗಿ ಅದ್ವೆತ್ ಶೆಟ್ಟಿ(7ನೇ), ಹಾಗೂ ಉಪನಾಯಕನಾಗಿ ನಿತಿನ್ ಕೆ (6ನೇ), ಬಹುಮತದಿಂದ ಅಯ್ಕೆಗೊಂಡರು.


ಕ್ರೀಡಾ ಮಂತ್ರಿಯಾಗಿ ದಿಗಂತ್ ಆಚಾರ್ಯ (7ನೇ), ಉಪ ಕ್ರೀಡಾ ಮಂತ್ರಿಯಾಗಿ ಹಸ್ತಾ (5ನೇ), ಸ್ವಚ್ಛತಾ ಮಂತ್ರಿಯಾಗಿ ರಿಷಿತ್ ಕೆ (7ನೇ), ಉಪ ಸ್ವಚ್ಛತಾ ಮಂತ್ರಿಯಾಗಿ ಶಮಂತ್ (6ನೇ), ಆರೋಗ್ಯ ಮಂತ್ರಿಯಾಗಿ ಸುಜನ್ (7ನೇ), ಉಪ ಆರೋಗ್ಯ ಮಂತ್ರಿಯಾಗಿ ತೃಷಾ (7ನೇ), ಸಾಂಸ್ಕೃತಿಕ ಮಂತ್ರಿಯಾಗಿ ರೋಶನ್ (7ನೇ) ,ಉಪ ಸಾಂಸ್ಕೃತಿಕ ಮಂತ್ರಿಯಾಗಿ ಆದ್ಯ ಆರ್. ಯಸ್ (5ನೇ),ಆಹಾರ ಮಂತ್ರಿಯಾಗಿ ಅಭೀತ್ (7ನೇ), ಉಪ ಆಹಾರ ಮಂತ್ರಿಯಾಗಿ, ಚರಿತ್( 7ನೇ), ವಿದ್ಯಾ ಮಂತ್ರಿಯಾಗಿ ಸುಜನ್ ( 7ನೇ),ಉಪ ವಿದ್ಯಾ ಮಂತ್ರಿಯಾಗಿ ಕ್ಷಿತಿ (5ನೇ), ನೀರಾವರಿ ಮಂತ್ರಿಯಾಗಿ ಸನ್ವಿತ್ ( 7ನೇ), ಉಪ ನೀರಾವರಿಮಂತ್ರಿಯಾಗಿ ಅನನ್ಯ.ಕೆ(6ನೇ) ಆಯ್ಕೆಯಾದರು.


ಚುನಾವಣಾ ನೋಡೆಲ್ ಅಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕ ಸುಖೇಶ್ ರೖೆ ಕಾರ್ಯನಿರ್ವಹಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಸುಹಾಸ್ ಪ್ರಮಾಣ ವಚನ ಭೋದಿಸಿದರು. ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here