ಪುತ್ತೂರು : ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಸಂಘದ ಪದಾಧಿಕಾರಿಗಳನ್ನು ಕ್ಯಾಬಿನೆಟ್ ಬ್ಯಾಜ್ ತೊಡಿಸುವುದರ ಮೂಲಕ ಅಭಿನಂದಿಸಿದರು, ಎಲ್ಲರೂ ಜೊತೆಯಾಗಿ ಸೇರಿಕೊಂಡು ಹೊಂದಾಣಿಕೆಯಿಂದ ಕೆಲಸ ಮಾಡುವುದು ನಾಯಕತ್ವ” ಎಂದು ನುಡಿದರು.
ಮುಖ್ಯ ಅತಿಥಿ ಶ್ರುತ ಅಕಾಡೆಮಿ ಮಂಗಳೂರು ಇದರ ನಿರ್ದೇಶಕ, ಡಾ. ಶ್ರುತಕೀರ್ತಿರಾಜ ಎಸ್ ಬಿ ವಿದ್ಯಾರ್ಥಿಗಳಿಗೆ ನಾಯಕತ್ವದ ಮಹತ್ವ , ಅದರ ಮುಖ್ಯ ಪಾತ್ರ ಮತ್ತು ಜವಬ್ದಾರಿಯನ್ನು ತಿಳಿಸಿಕೊಟ್ಟರು. ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅದ್ಯಕ್ಷೀಯ ನೆಲೆಯಲ್ಲಿ ಮಾತಾನಾಡಿ ನಾಯಕತ್ವ ಎನ್ನುವುದು ಬರಿ ಹುದ್ದೆಯಲ್ಲ, ಸಮಸ್ಯೆಗಳನ್ನು ಚಾಣಾಕ್ಷತೆಯಿಂದ ಬಗೆಹರಿಸುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ‘ಒಲಿಂಪಿಯಾಡ್’ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕಿ ಲಿಖಿತಾ ಎಂ ಎನ್ ನಡೆಸಿಕೊಟ್ಟರು.
ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ಎನ್ ಸುಂದರ್ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ , ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ ರೈ ಕುಲಾಯಿ ಉಪಸ್ಥಿತರಿದ್ದರು.
ಕಾರವಂದಿಸಿವ ಕ್ರಮವನ್ನು ಸಜಾ ನಿರೂಪಣೆಗೈದು, ಖದೀಜತ್ ಅಝೀ ಸ್ವಾಗತಿಸಿ, ವಿದ್ಯಾರ್ಥಿಸಂಘದ ಅಧ್ಯಕ್ಷೆ ಆವನಿ ರೈ ವಂದಿಸಿದರು.