ವಿಟ್ಲ ಸರಕಾರಿ ಐಟಿಐ ಸಂಸ್ಥೆಯಲ್ಲಿ ರಸ್ತೆ ಸುರಕ್ಷತೆ ಮಾದಕ ವಸ್ತು ಹಾಗೂ ಪೋಕ್ಸೋ ಕಾನೂನು ಬಗ್ಗೆ ಜಾಗೃತಿ ಕಾರ್ಯಾಗಾರ

0

ಪುತ್ತೂರು:ವಿಟ್ಲ ಸರಕಾರಿ ಐಟಿಐ ಸಂಸ್ಥೆಯಲ್ಲಿ ರಸ್ತೆ ಸುರಕ್ಷತೆ ಮಾದಕ ವಸ್ತು ಹಾಗೂ ಪೋಕ್ಸೋ ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಹರೀಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಟ್ಲ ಠಾಣೆಯ ಉಪನಿರೀಕ್ಷಕ ರತ್ನ ಕುಮಾರ್ ದೀಪ ಪ್ರಜ್ವಲಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ‌ ವಿಟ್ಲ ಆರಕ್ಷಕ ಠಾಣೆಯ ಹೆಡ್ ಕಾನ್ಸ್ಟೆಬಲ್ ಹರೀಶ್ ಮಾತನಾಡಿ, “ಪ್ರತಿದಿನ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಪ್ರಮುಖ ಕಾರಣ ಪರವಾನಿಗೆ ಇಲ್ಲದ ಚಾಲನೆ ಮತ್ತು ನಿಯಮ ಉಲ್ಲಂಘನೆ. ಯುವಜನರು ಈ ಬಗ್ಗೆ ಹೆಚ್ಚಿನ ಜಾಗೃತಿಯಿಂದ ನಡೆದುಕೊಳ್ಳಬೇಕು’ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಬಳಕೆಯ ಅಗತ್ಯತೆ, ಸೀಟ್ ಬೆಲ್ಟ್ ಧರಿಸುವ ಮಹತ್ವ, ಮಧ್ಯಪಾನ ಮತ್ತು ಚಾಲನೆಯ ಭಯಾನಕ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದರೊಂದಿಗೆ ಇತರರಿಗೂ ತಿಳುವಳಿಕೆ ನೀಡುವುದು ಹಾಗೂ ಪೋಷಕ ಹಾಗೂ ಶಿಕ್ಷಕರೊಂದಿಗೆ ಸಹಕರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಮಾದಕ ವಸ್ತುವಿನಿಂದ ಅನೇಕ ದೈಹಿಕ, ಮಾನಸಿಕ. ರೋಗಗಳ ಬಗ್ಗೆ ಕೊನೆಗೆ ಸಾವಿನ ಅಪಾಯ ಕುಟುಂಬದ ಮೇಲೆ ಪರಿಣಾಮ ಸಾಮಾಜಿಕ ಸಂಬಂಧ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬಗ್ಗೆ ವಿಸ್ತ್ರತ ಅರಿವನ್ನು ಮೂಡಿಸಿದರು.

ವಿದ್ಯಾರ್ಥಿ ಹಿತೇಶ್ ಪ್ರಾರ್ಥಿಸಿದರು. ಕಿರಿಯ ತರಬೇತಿ ಅಧಿಕಾರಿ ರತಿ ವಿ ಸ್ವಾಗತಿಸಿ, ಜೋಯ್ಲಿನ್ ಕ್ರಾಸ್ತ ನಿರೂಪಿಸಿದರು. ಶರತ್ ಕುಮಾರ್ ಎಸ್ ಎಚ್ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here