ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ನ ವಿವಿಧ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಕೈಗೊಳ್ಳುವ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನ್ಹಸ್ರವರು ನೂತನವಾಗಿ ಆರಿಸಲ್ಪಟ್ಟ ಶಾಲಾ ಸಂಸತ್ನ ಸದಸ್ಯರುಗಳಿಗೆ ಪದನಾಮಕ್ಕೆ ಅನುಗುಣವಾಗಿ ಹೆಗಲಪಟ್ಟಿಯನ್ನು ನೀಡಿದರು. ವಿವಿಧ ಸಂಘಗಳ ಹೆಸರುಗಳನ್ನೊಳಗೊಂಡ ಫಲಕವನ್ನು ಅನಾವರಣಗೊಳಿಸಿ ಉದ್ಘಾಟಿಸಿದರು.
ಮುಖ್ಯಗುರು ವಂ| ಮ್ಯಾಕ್ಸಿಮ್ ಡಿಸೋಜರವರು ಸಂಸತ್ನ ಸದಸ್ಯರುಗಳಿಗೆ ಪ್ರತಿಜ್ಞಾ ವಿದಿ ಬೋಧಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಜೀತನ್ ಮತ್ತು ಉಪನಾಯಕಿ ಮರ್ಯಾಮ್ ವಿಜ್ದಾನ್ ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾಹಕ ಸಂಘ, ಸಾಂಸ್ಕೃತಿಕ ಸಂಘ, ಪರಿಸರ ಸಂಘ, ವಿಜ್ಞಾನ ಸಂಘ, ಗಣಿತ ಸಂಘ, ಚುನಾವಣಾ ಜಾಗೃತಿ ಸಂಘ, ಕ್ರೀಡಾ ಸಂಘ ಮತ್ತು ಚಿತ್ರಕಲಾ ಸಂಘಗಳ ಮಾರ್ಗದರ್ಶಕ ಶಿಕ್ಷಕರ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಪರಿಚಯವನ್ನು ನೀಡಲಾಯಿತು.
ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನ್ಹಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಾಯ್ ದೆ ದೆವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷೆ ಸೌಮ್ಯ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ವಂ| ಮ್ಯಾಕ್ಸಿಮ್ ಡಿಸೋಜ ಸ್ವಾಗತಿಸಿ ಶಾಲಾ ಸಂಸತ್ನ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ವಂದಿಸಿದರು. ರೇಷ್ಮಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ನರೇಶ್ ಲೋಬೊ ಮತ್ತು ಶಿಕ್ಷಕಿ ಮೋಲಿರವರು ಸಹಕರಿಸಿದರು.