ವಿಟ್ಲ: ಶಿವಾಜಿ ಬಳಗ ಶ್ರೀರಾಮನಗರ ಮಧ್ವ ಇದರ ವತಿಯಿಂದ ವನಮಹೋತ್ಸವ 2025 ಕಾರ್ಯಕ್ರಮದಡಿಯಲ್ಲಿ ಮಧ್ವದ ಶ್ರೀ ಅಯ್ಯಪ್ಪ ಮಂದಿರದಲ್ಲಿ, ಶ್ರೀ ಕೊಡಮಣಿತ್ತಾಯ ಸ್ಥಾನದ ಬಳಿ ಹಾಗೂ ಮಧ್ವ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು.
ಅಯ್ಯಪ್ಪ ಮಂದಿರದ ಅರ್ಚಕರಾದ ರಮೇಶ್ ಆಚಾರ್ಯ, ಕಾವಳಪಡೂರು ಗ್ರಾಮ ಪಂಚಾಯತ್ ಸದಸ್ಯೆ ಭವಾನಿ ಶ್ರೀಧರ್ ಪೂಜಾರಿ, ಸರಪಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಸತೀಶ್ ಶೆಟ್ಟಿ ಮಧ್ವಕಟ್ಟೆ, ಬಳಗದ ಗೌರವಧ್ಯಕ್ಷರು ಮತ್ತು ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಮಧ್ವ, ಶಿವಾಜಿ ಬಳಗದ ಪ್ರಸ್ತುತ ಅಧ್ಯಕ್ಷರಾದ ಅವಿನಾಶ್, ಸಂಚಾಲಕರುಗಳಾದ ನಾಗೇಶ್ ಮಧ್ವ , ಧನುಷ್ ಮಧ್ವ ಹಾಗೂ ಶಿವಾಜಿ ಬಳಗದ, ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಶಿವರಾಜ್ ಗಟ್ಟಿ ನಿರೂಪಿಸಿದರು.