ಶ್ರೀ ಕ್ಷೇತ್ರ ಶರವೂರು ದುರ್ಗಾಂಬಾ ಅಲಂಕಾರ ಸಮಿತಿಯ ಸಭೆ – ಲೆಕ್ಕಪತ್ರ ಮಂಡನೆ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾಂಬಾ ಅಲಂಕಾರ ಸಮಿತಿಯ ಸಭೆಯು ದುರ್ಗಾ ಟವರ್ಸ್ ಆಲಂಕಾರಿನಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಉಪಸ್ಥಿತಿಯಲ್ಲಿ ನಡೆಯಿತು.


ಶ್ರೀ ಕ್ಷೇತ್ರ ಶರವೂರು ಅಲಂಕಾರ ಸಮಿತಿಯ ಅಧ್ಯಕ್ಷ ಗಣರಾಜ್ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಆಲಂಕಾರು ಪೇಟೆಯಲ್ಲಿ ಹಾಕಿದ ಅಲಂಕಾರದ ಲೆಕ್ಕಚಾರ ಮಂಡಿಸಿ ಕಳೆದ ಜಾತ್ರೋತ್ಸವ ಸಂಧರ್ಭದಲ್ಲಿ ಎಲ್ಲಾ ಭಕ್ತಾದಿಗಳ ಸಹಕಾರದೊಂದಿಗೆ ಒಟ್ಟು 2,09,657 ಲಕ್ಷ ರೂಪಾಯಿ ಜಮೆಯಾಗಿದ್ದು, ಬ್ಯಾನರ್,ಬಂಟಿಂಗ್ಸ್, ಲೈಟಿಂಗ್ಸ್ ,ಮಜ್ಜಿಗೆ, ಕೀಲು ಕುದುರೆ ಮತ್ತು ಇನ್ನಿತರ ಒಟ್ಟು ಖರ್ಚು ಸೇರಿ 1,98,670 ರೂ ಖರ್ಚಾಗಿದ್ದು 10,987 ರೂಪಾಯಿ ಉಳಿಕೆಯಾಗಿದೆ ಇದನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿದರು.

ಬರುವ ವರ್ಷ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ‌ಮತ್ತು ಜಾತ್ರೋತ್ಸವ ನಡೆಯಲಿದ್ದು, ಭಕ್ತಾದಿಗಳು ತನು ಮನ ಧನಗಳಿಂದ ಸಹಕರಿಸುವಂತೆ ವಿನಂತಿಸಿದರು.ಸಭೆಯಲ್ಲಿ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಗಣರಾಜ್ ಆಲಂಕಾರು, ಸಂಚಾಲಕರಾಗಿ ಶಶಿಕಿರಣ್ ಶೆಟ್ಟಿ ಪದವು, ಕಾರ್ಯದರ್ಶಿಯಾಗಿ ಮೋಹನಕುಮಾರ್ ಪಟ್ಟೆ,ಕೋಶಾಧಿಕಾರಿಯಾಗಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸೇಸಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ಮಲ್ಲೇಶ ನಗ್ರಿ,ರಿತೇಶ್ ರವರನ್ನು ಮುಂದುವರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು, ಉತ್ಸವ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಪ್ರಭು,ಪ್ರಮುಖರಾದ ದಾಮೋದರ ಆಚಾರ್ಯ ಆಲಂಕಾರು, ಕೇಶವ ಗೌಡ ಆಲಡ್ಕ, ದಿನೇಶ್ ದೇವಾಡಿಗ, ಜಯಪ್ರಕಾಶ್ ಪಟ್ಟೆ, ಇಂದುಶೇಖರ ಶೆಟ್ಟಿಕುಕ್ಕೇರಿ, ಗಣೇಶ್ ಹಿರಿಂಜರವರು ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆ ನೀಡಿದರು.ಆಲಂಕಾರ ಸಮಿತಿಯ ಸಂಚಾಲಕ ಶಶಿಕಿರಣ್ ಸ್ವಾಗತಿಸಿ, ಕಾರ್ಯದರ್ಶಿ ಮೋಹನ ಕುಮಾರ್ ಪಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here