ಪುತ್ತೂರು: ಬದ್ರಿಯಾ ಜುಮಾ ಮಸೀದಿ ಹಾಗೂ SKSSF ಮತ್ತು SKSBV ವತಿಯಿಂದ ಸಮಸ್ತ ಸ್ಥಾಪನಾ ದಿನಾಚರಣೆ ಅದ್ದೂರಿಯಾಗಿ ನಡೆಯಿತು. ಜಮಾತ್ ಅಧ್ಯಕ್ಷ RM ಅಲಿ ಹಾಜಿ ದ್ವಜಾರೋಹಣಗೈದರು.

ಸ್ಥಳೀಯ ಖತೀಬ್ ಉಸ್ತಾದ್ ಅಬ್ದುಲ್ ನಾಸಿರ್ ಫೈಝಿ ಸಮಸ್ತದ ಹಾದಿಯ ಕುರಿತು ಮಾತನಾಡಿ, ವಿದ್ಯುಕ್ತ ಚಾಲನೆ ನೀಡಿದರು. ಮದರಸ ಅಧ್ಯಾಪಕ ಅಬೂಬಕ್ಕರ್ ಮುಸ್ಲಿಯಾರ್ ದುಆ ನೇತೃತ್ವ ನೀಡಿದರು.
SKSSF ಅಧ್ಯಕ್ಷ ಅಝೀಝ್ ರೆಂಜಲಾಡಿ , ಆದರ್ಶ ಸೇವಾ ಸಂಘದ ಕಾರ್ಯದರ್ಶಿ ಆಸಿಫ್ ರೆಂಜಲಾಡಿ ,ಸಮಸ್ತ ಕಾರ್ಯಕರ್ತರು , ಮದರಸ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.