ಆರ್. ಎನ್. ದೇವಿಪ್ರಸಾದ್ ಗೌಡ ಅವರಿಗೆ ಪಿ.ಎಚ್.ಡಿ. ಪದವಿ

0

ಪುತ್ತೂರು: ಮಂಗಳೂರು ಶ್ರೀನಿವಾಸ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಇಲ್ಲಿಯ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದ ದೇವಿಪ್ರಸಾದ್ ಗೌಡ ಆರ್‌ ಎನ್‌ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.

ಮಂಗಳೂರು ಶ್ರೀನಿವಾಸ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ. ಸೂರ್ಯ ನಾರಾಯಣ ಕೆ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “Fabrication and characterization of Packing materials and fiber Reinforced composite materials using Areca Sheath” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಗೌರವ ಸಂದಿದೆ.

ಅವರು ಬಂಟ್ವಾಳ ತಾಲೂಕಿನ ಅಳಿಕೆಯ ರೆಂಜಾಡಿ ನೀಲಪ್ಪ ಗೌಡ ಮತ್ತು ಜಯಂತಿ ಕೆ ಇವರ ಸುಪುತ್ರ.

LEAVE A REPLY

Please enter your comment!
Please enter your name here