ಕುಂತುರೂಪದವು ಶಾಲಾ ಮಂತ್ರಿಮಂಡಲ ರಚನೆ

0

ಕಡಬ: ಸ.ಹಿ.ಪ್ರಾ.ಶಾಲೆ ಕುಂತೂರುಪದವು ಇಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.


ಶಾಲಾ ನಾಯಕನಾಗಿ ವಚನ್ ಕೆ.ಎಸ್.(೭ನೇ), ಉಪನಾಯಕನಾಗಿ ಪೂರ್ಣೇಶ್ ಎಚ್. (೬ನೇ) ಆಯ್ಕೆಯಾದರು. ಇ.ವಿ.ಎಂ.ಮೊಬೈಲ್ ಆಪ್ ಮೂಲಕ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಸಭಾಪತಿಯಾಗಿ ಅನುಶ್ರೀ ಹಿರೇಮಠ್( ೭ನೇ ), ಗೃಹ ಮಂತ್ರಿಯಾಗಿ ಹಿತೇಶ್ ಕೆ., ಶಿಕ್ಷಣ ಮಂತ್ರಿಯಾಗಿ ನೇಹಾ ಕೆ.ಎನ್, ಆರೋಗ್ಯಮಂತ್ರಿಯಾಗಿ ಆಫೀಝ, ಸಾಂಸ್ಕೃತಿಕ ಮಂತ್ರಿಯಾಗಿ ರೇಷ್ಮಾ ಬಿ.ಎಸ್., ಸ್ವಚ್ಛತಾ ಮಂತ್ರಿಯಾಗಿ ಪ್ರೀತಮ್ ಕೆ.ಎಚ್., ತೋಟಗಾರಿಕಾ ಮಂತ್ರಿಯಾಗಿ ಮನ್ವಿತ್, ರಕ್ಷಣಾ ಮಂತ್ರಿಯಾಗಿ ನಿಶಾಂತ್ ಎ, ನೀರಾವರಿ ಮಂತ್ರಿಯಾಗಿ ರಿತೇಶ್ ಆರ್.ಕೆ., ವಾರ್ತಾ ಮಂತ್ರಿಯಾಗಿ ಕಿಶ್ವಿತ್ ಜಿ.ಕೆ., ಕ್ರೀಡಾಮಂತ್ರಿಯಾಗಿ ಸುಮಂತ್ ಬಿ, ಆಹಾರ ಮಂತ್ರಿಯಾಗಿ ಜನನಿ ಐ.ವಿ., ಶಿಸ್ತು /ಸಮಯ ಪಾಲನೆ ಮಂತ್ರಿಯಾಗಿ ವಿನುತ್ ಮತ್ತು ವಿರೋಧ ಪಕ್ಷದ ನಾಯಕಿಯಾಗಿ ಅಮೂಲ್ಯ ೭ನೇ ಆಯ್ಕೆಯಾದರು.


ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ವಿ. ಚುನಾವಣಾ ಪ್ರಕ್ರಿಯೆಗೆ ಮಾರ್ಗದರ್ಶ ನೀಡಿದರು. ಸಹ ಶಿಕ್ಷಕರಾದ ಕೇಶವ ಕೆ., ಶಿವಣ್ಣ, ಕುಸುಮ, ಹಾಗೂ ಗೌರವ ಶಿಕ್ಷಕಿ ಗಾಯತ್ರಿ ಸಹಕರಿಸಿದರು.

LEAVE A REPLY

Please enter your comment!
Please enter your name here