ನೂರುಲ್ ಹುದಾ ಮಸ್ಜಿದ್ & ಮದ್ರಸ ನೀರಾಜೆ ಸಮಸ್ತ 100 ನೇ ಸ್ಥಾಪಕ ದಿನಾಚರಣೆ

0

ಪುತ್ತೂರು: ನೂರುಲ್ ಹುದಾ ಮಸ್ಜಿದ್ & ಮದ್ರಸ ನೀರಾಜೆ ಸಮಸ್ತ 100 ನೇ ಸ್ಥಾಪಕ ದಿನಾಚರಣೆ ಜೂನ್ 26 ನೀರಾಜೆ ಮಸ್ಜಿದ್ ವಠಾರದಲ್ಲಿ ಆಚರಿಸಲಾಯಿತು.

ಇದರ ಪ್ರಯುಕ್ತ ಧ್ವಜಾರೋಹಣ ವಿಶೇಷ ಅಸೆಂಬ್ಲಿ ಪ್ರಾರ್ಥನೆ ಹಾಗೂ ಶೈಖುನಾ ಮಾಣಿಯೂರ್ ಉಸ್ತಾದ್ ಅನುಸ್ಮರಣೆ ಮತ್ತು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಇದರ ಅಂತಾರಾಷ್ಟ್ರೀಯ100ನೇ ವಾರ್ಷಿಕ ಮಹಾ ಸಮ್ಮೇಳನ 2026 ಫೆಬ್ರವರಿ 04 ರಿಂದ 08 ರ ತನಕ ಕಾಸರಗೋಡ್ ಕುನಿಯ ದಲ್ಲಿ ನಡೆಯಲಿದೆ ಇದರ ಲೋಗೋ ಪ್ರದರ್ಶನ ನಡೆಸಲಾಯಿತು.

ಸ್ಥಳೀಯ ಉಸ್ತಾದ್ ರವರಾದ ಶೌಕತ್ ಅಲಿ ಅಸ್ಲಮಿ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಗೂ ಧ್ವಜಾರೋಹಣ ಕಾರ್ಯಕ್ರಮವನ್ನು ಆಡಳಿತ ಸಮಿತಿಯ ಅಧ್ಯಕ್ಷ N ಸಿದ್ದೀಕ್ ಯವರು ನಡೆಸಿಕೊಟ್ಟರು.
ಅಬ್ದುಲ್ ಲತೀಫ್ ಫೈಝಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಆಡಳಿತ ಸಮೀತಿ ಉಪಾಧ್ಯಕ್ಷ ಯೂಸುಫ್ ಕಾರ್ಯದರ್ಶಿ ಫುತ್ತು ಕುಂಜಿ,ಕೋಶಾಧಿಕಾರಿ ನಝೀರ್ N K, 𝗦𝗞𝗦𝗦𝗙 ನೀರಾಜೆ ಶಾಖೆ ಅಧ್ಯಕ್ಷ ಹನೀಫ್, ಅನ್ಸಾರುಲ್ ಇಸ್ಲಾಂ ಯಂಗಮೆನ್ಸ್ ಅಧ್ಯಕ್ಷ ಸಿರಾಜ್, ವಿಖಾಯ ಚೆರ್ಮನ್ ಅಬ್ದುಲ್ ಅಝೀಝ್, ಯಾಕೊಬ್ ಕೊಹಿಲ,ಇಕ್ಬಾಲ್ ಜಾಬಿರ್ ಅಜ್ಮಿಲ್ ನೀರಾಜೆ ಶಾಖೆ 𝗦𝗞𝗦𝗕𝗩 ಅಧ್ಯಕ್ಷ ಅಲ್ ಅಮೀನ್ ಕೋಶಾಧಿಕಾರಿ ತ್ವಲ್ಹಾ ಇಬ್ರಾಹಿಂ ಸಂಘಟನಾ ಕಾರ್ಯದರ್ಶಿ ಶಿಹಾಬುದ್ದೀನ್ ಹಾಗೂ ಪದಾಧಿಕಾರಿಗಳು ಮದ್ರಸ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.

LEAVE A REPLY

Please enter your comment!
Please enter your name here