ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರ್ಕಾರಿ ಪ್ರೌಢಶಾಲಾ ಮಂತ್ರಿಮಂಡಲದ ನಾಯಕರಾಗಿ ಪವನ್(10ನೇ) ಮತ್ತು ಉಪನಾಯಕನಾಗಿ ವರ್ಷನ್(9ನೇ) ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷದ ನಾಯಕಿಯಾಗಿ ಚಿಂತನ(10ನೇ), ಶಿಕ್ಷಣ ಮಂತ್ರಿಯಾಗಿ ಧನ್ವಿತ್ (10ನೇ), ಮಹಿಳಾ ಮಂತ್ರಿಯಾಗಿ ಅನುವಿತ (10ನೇ) ,ಗೃಹ ಮಂತ್ರಿಯಾಗಿ ಮನ್ವಿತ್ (10ನೇ,)
ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮತ್ ಶಂಶೀನ (10ನೇ), ಸ್ವಚ್ಛತಾ ಮಂತ್ರಿಗಳಾಗಿ ಕೌಶಿಕ್ ಕೆ (10ನೇ) ಮತ್ತು ಸ್ವಾಬಿರ (10ನೇ) ,ತೋಟಗಾರಿಕಾ ಮಂತ್ರಿಯಾಗಿ ಕೌಶಿಕ್ (10ನೇ), ನೀರಾವರಿ ಮಂತ್ರಿಯಾಗಿ ಮುರಳಿ (10ನೇ), ಸಹಾಯಕ ಮಂತ್ರಿಗಳಾಗಿ ಸಾನ್ವಿ (9ನೇ), ಪಿ .ಮೋಹಿತ್ ಕುಮಾರ್ (9ನೇ), ರೋಶನ್ ಡಿಸೋಜ (9ನೇ), ಸೇವಂತ್( 9ನೇ), ಶಶಾಂತ್ (9ನೇ), ರೋಹಿತ್ (9ನೇ), ನಂದ ಕಿಶೋರ (9ನೇ) ಮತ್ತು ಸಾನ್ವಿತ್ (9ನೇ) ಆಯ್ಕೆಯಾದರು.
ಮತದಾರರ ಸಾಕ್ಷರತಾ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕರಾದ ಜಯಂತಿ ಜೆ.ಅವರ ನೇತೃತ್ವದಲ್ಲಿ ಮೊಬೈಲ್ ಆಪ್ ಮೂಲಕ ಮತದಾನ ನಡೆಸಲಾಯಿತು. ಶಿಕ್ಷಕರಾದ ನಿರ್ಮಲ ರೊಡ್ರಿಗಸ್, ಧನಲಕ್ಷ್ಮಿ, ಲಿಂಗಪ್ಪ ಎನ್, ದೀಪ ಎಂ, ಜ್ಯೋತಿರಾಣಿ ಮತ್ತು ಗ್ರೇಸಿ ಡಿಸೋಜ ಸಹಕರಿಸಿದರು.