ಪುತ್ತೂರು: ಕೊರಿಗಿಂಲ ಜಮಾಅತ್ ಕಮಿಟಿ ಹಾಗೂ ಮಿಸ್ಬಾಹುಲ್ ಹುದಾ ಮದ್ರಸ ಇದರ ವತಿಯಿಂದ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಇದರ 100ನೇ ಸಾಪ್ಥಕ ದಿನಾಚರಣೆ ಕಾರ್ಯಕ್ರಮ ಕೊರಿಗಿಂಲ ಮದ್ರಸ ವಠಾರದಲ್ಲಿ ನಡೆಯಿತು. ಕೊರಿಗಿಂಲ ಜಮಾಅತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು. ನಂತರ ಸ್ಥಳೀಯ ಖತೀಬ್ ಅಯ್ಯೂಬ್ ವಹಬಿ ಮಾತನಾಡಿ ಸಮಸ್ತ ಉಲಮಾಗಳು ಸಮುದಾಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿ ಸಮಸ್ತದ ಬಗ್ಗೆ ವಿವರಿಸಿದರು.

ಹಮೀದ್ ಪೈಝಿ ಶುಭ ಹಾರೈಸಿದರು. ಮದ್ರಸದಲ್ಲಿ ನಡೆದ ಸಮಸ್ತದ ಕ್ವಿಝ್ ಸ್ವರ್ದೆ ಮತ್ತು ಚಿತ್ರ ಕಲೆಯಲ್ಲಿ ಪ್ರಥಮ, ದ್ವೀತಿಯ, ತೃತೀಯ, ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಪ್ರೊತ್ಸಾಹಿಸಲಾಯಿತು. ಕೊರಿಗಿಂಲ ಜಮಾಅತ್ ಕಮಿಟಿ ಪ್ರ.ಕಾರ್ಯದರ್ಶಿ ಮೂಸೆಕುಂಞಿ ಶಾಲಾಬಳಿ, ಜಮಾಅತ್ ಕಮಿಟಿ ಸದಸ್ಯ ಅನ್ವರ್, ಮಾಜಿ ಕಾರ್ಯದರ್ಶಿ ಅಬ್ದುಲ್ ಹಮೀದ್, ಅಶ್ರಫ್ ಕೊರಿಗಿಂಲ ಉಪಸ್ಥಿತರಿದ್ದರು. ಸ್ಥಳೀಯ ಮದ್ರಸದ ಎಸ್ಕೆಎಸ್ಬಿವಿ ವಿದ್ಯಾರ್ಥಿಗಳು ಎಲ್ಲರೂ ಪಾಲ್ಗೊಂಡಿದ್ದರು.
ಸ್ಥಳೀಯ ಮುಅಲ್ಲಿಂ ಅಬೂಬಕ್ಕರ್ ಮದನಿ ವಂದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಎಸ್ಕೆಎಸ್ಸೆಸ್ಸೆಫ್ ಕೊರಿಗಿಂಲ ಶಾಖೆ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.
ಸ್ಥಳೀಯ ಮದ್ರಸದ ಮುಅಲ್ಲಿಂ ಸ್ವಾದಿಕ್ ಮುಸ್ಲಿಯಾರ್ ಎಂಪೆಕಲ್ಲ್ ಸ್ವಾಗತಿಸಿ ವಂದಿಸಿದರು.