ರಾಮಕುಂಜ: ಕೊಯಿಲ ಹಾಗೂ ಹಿರೇಬಂಡಾಡಿ ಗ್ರಾಮದ ಗಡಿಭಾಗದಲ್ಲಿರುವ ಕೆಮ್ಮಾರ ಶ್ರೀ ಚೌಡೇಶ್ವರೀ ( ಶ್ರೀ ದುರ್ಗಾ ಪರಮೇಶ್ವರೀ) ದೇವಸ್ಥಾನದ ಜೀರ್ಣೋದ್ಧಾರದ ಸಲುವಾಗಿ ಕಳೆದ ವರ್ಷದಂತೆ ಈ ವರ್ಷವೂ ಹಿರೇಬಂಡಾಡಿ, ಕೊಯಿಲ, ರಾಮಕುಂಜ, ಆಲಂಕಾರು, ಹಳೆನೇರೆಂಕಿ ಗ್ರಾಮದ ಮನೆ, ಮನೆಗಳಿಗೆ (ಜಿಲ್ಲಾ ಯಕ್ಷಗಾನ, ಚಿಕ್ಕಮೇಳದ ಸಮಿತಿ ಹಾಗೂ ಗ್ರಾಮಪಂಚಾಯತ್ನ ಅನುಮತಿ ಪಡೆದು) ಭೇಟಿ ನೀಡಿ ಯಕ್ಷಗಾನ ಪ್ರದರ್ಶನ ನೀಡಲಿರುವ ಚಿಕ್ಕಮೇಳದ ಉದ್ಘಾಟನೆ ಜೂ.26ರಂದು ಕೆಮ್ಮಾರ ಶ್ರೀ ಚೌಡೇಶ್ವರೀ ( ಶ್ರೀ ದುರ್ಗಾ ಪರಮೇಶ್ವರೀ ) ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಪ್ರಮುಖರಾದ ಸಂಜೀವ ನೇಕಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚಿಕ್ಕಮೇಳ ಒಕ್ಕೂಟ ಸಮಿತಿಯ ಅಧ್ಯಕ್ಷರಾದ ಅಶೋಕ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಹಾಗೂ ಸಂಸ್ಕೃತಿ ಉಳಿವಿಗಾಗಿ ಚಿಕ್ಕಮೇಳ ಮನೆ ಮನೆಗೆ ತೆರಳುವುದು ಉತ್ತಮ ಯೋಜನೆ. ಇದು ಮನೆ ಮನೆಗೆ ದೇವರು ಬಂದಂತೆ, ಎಲ್ಲರೂ ಭಕ್ತಿ, ಗೌರವದಿಂದ ಬರಮಾಡಿಕೊಳ್ಳಿ, ದೇವಸ್ಥಾನವು ನಿಮ್ಮ ಹೆಸರಿನಲ್ಲಿ ಅಭಿವೃದ್ಧಿ ಆಗುತ್ತದೆ, ನಿಮ್ಮ ಮನೆಯು ಪಾವನವಾದಂತೆ ಎಂದು ಹೇಳಿ ಶುಭಹಾರೈಸಿದರು.
ಅತಿಥಿಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು, ನಿವೃತ್ತ ಉಪನ್ಯಾಸಕ ಗಣರಾಜ ಕುಂಬ್ಳೆ, ಕೃಷಿಕ ಉದಯ ಕಶ್ಯಪ ಪೂರಿಂಗ, ಪ್ರಭಾಕರ ಆಳ್ವ, ಕೆ.ಟಿ.ಪೂಜಾರಿ ಕೆರ್ನಡ್ಕ, ಚಿಕ್ಕಮೇಳದ ಉಸ್ತುವಾರಿ ಪ್ರಮುಖರಾದ ಜಗನ್ನಾಥ ನೇಕಾರ, ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ಸಮಿತಿ ಪ್ರಮುಖರಾದ ಮೋಹನದಾಸ್ ಬಡಿಲ ಸ್ವಾಗತಿಸಿದರು. ಜಗನ್ನಾಥ ನೇಕಾರ ವಂದಿಸಿದರು. ಪ್ರಕಾಶ್ ಕೆಮ್ಮಾರ ಕಾರ್ಯಕ್ರಮ ನಿರೂಪಿಸಿದರು. ವಾರಿಜಾಕ್ಷಿ ಪ್ರಾರ್ಥಿಸಿದರು. ದೇವಸ್ಥಾನದ ಸಮಿತಿಯ ಸದಸ್ಯರಾದ ಯದುಶ್ರೀ ಆನೆಗುಂಡಿ, ವಾಸುದೇವ ಆಚಾರ್ಯ, ಕುಶಾಲಪ್ಪ ಗೌಡ ಕೆಮ್ಮಾರ, ವಸಂತ, ರಾಮಣ್ಣ ನೇಕಾರ, ಗೋಪಾಲ ನೇಕಾರ, ಪುರುಷೋತ್ತಮ ಗೋಕುಲನಗರ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.