ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಕಾಮಧೇನು’ ಗೋ ಶಾಲೆಯಲ್ಲಿ ಗೋವುಗಳಿಗೆ ಎಲ್ಲಾ ಸೌಕರ್ಯ ಮಾಡಿದ ಬಳಿಕ ಇದೀಗ ಹಳೆ ಗೋ ಶಾಲೆಯನ್ನು ಸಂಪೂರ್ಣವಾಗಿ ತೆರವು ಮಾಡಲಾಗಿದ್ದು, ದೇವಸ್ಥಾನದ ಜಾಗ ವಿಶಾಲವಾಗಿ ಕಾಣುತ್ತಿದೆ. ಹಳೆ ಗೋ ಶಾಲೆಯು ಗೋವುಗಳಿಗೆ ಇಕ್ಕಟ್ಟಾಗಿರುವ ಕಾರಣಕ್ಕಾಗಿ ಪಕ್ಕದಲ್ಲೇ ಇರುವ ಸಭಾಂಗಣದಲ್ಲಿ ವಿಶಾಲವಾದ ಗೋ ಶಾಲೆಯನ್ನಾಗಿ ಮಾಡಿ ಅಲ್ಲಿಗೆ ಗೋವುಗಳನ್ನು ಸೇರಿಸಲಾಯಿತು. ಇದೀಗ ಹಳೆಯ ಗೋ ಶಾಲೆಯನ್ನು ತೆರವು ಮಾಡಲಾಗಿದೆ.
ಜಾತ್ರೆಯಲ್ಲಿ ಸ್ಟಾಲ್ ವ್ಯವಸ್ಥೆಗೆ ಸೂಕ್ತ ಜಾಗ
ಹಳೆಯ ಗೋ ಶಾಲೆಯನ್ನು ತೆರವು ಮಾಡಿದಾಗ ದೇವಸ್ಥಾನಕ್ಕೆ ಇನ್ನಷ್ಟು ಜಾಗ ಸಿಕ್ಕಿದೆ.ಇದರಿಂದಾಗಿ ಜಾತ್ರೆ ಸಂದರ್ಭದಲ್ಲಿ ಸ್ಟಾಲ್ಗಳನ್ನು ಹಾಕುವಲ್ಲಿ ಪ್ರಯೋಜನ ಆಗಲಿದೆ.ದೇವಳಕ್ಕೂ ಹೆಚ್ಚಿನ ಆದಾಯ ಬರುತ್ತದೆ.ಮುಂದೆ ಮಾಸ್ಟರ್ ಪ್ಲ್ಯಾನ್ನಂತೆ ಅಭಿವೃದ್ಧಿ ಕಾರ್ಯ ನಡೆಯಲಿದೆ.ಈಗ ತಾತ್ಕಾಲಿಕ ಗೋ ಶಾಲೆಯನ್ನು ಗೋವುಗಳಿಗೆ ಅನುಕೂಲ ಆಗುವಂತೆ ವಿಶಾಲಗೊಳಿಸಲಾಗಿದೆ. ಮುಂದೆ ಅಲ್ಲಿ ಗೋ ಪೂಜೆ ಮಾಡಿಸುವ ಭಕ್ತರಿಗೂ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ
-ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು