ಪುತ್ತೂರು: ಇನ್ನರ್ ವ್ಹೀಲ್ ಕ್ಲಬ್, ಪುತ್ತೂರು, ಕುರಿಯ ಗ್ರಾಮ ವಿಕಾಸ ಸಮಿತಿ, ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ, ಪ್ರಗತಿ ಎಜುಕೇಶನ್ ಟ್ರಸ್ಟ್, ಪುತ್ತೂರು, ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ಹಾಗೂ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಸಹಯೋಗದಲ್ಲಿ ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ (ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳು) ಜೂ.29 ರಂದು ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಕುರಿಯ ಉಳ್ಳಾಲ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜರಗಿತು.

ವಿಶಿಷ್ಟವಾದ ಕಾರ್ಯಕ್ರಮ-ಡಾ.ದೀಪಕ್ ರೈ
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ರವರು ಶಿಬಿರದ ಉದ್ಘಾಟಸಿ, ಮಾತನಾಡಿ ಆರೋಗ್ಯ ತಪಸಣಾ ಶಿಬಿರಗಳು ಜನಸಾಮನ್ಯರಿಗೆ ಮುಟ್ಟಲು ಒಂದು ವೇದಿಕೆಯಾಗಿದೆ. ಇದೊಂದು ವಿಶಿಷ್ಟವಾದ ಕಾರ್ಯಕ್ರಮ, ಇಂಥ ಕಾರ್ಯಕ್ರಮಗಳಿಗೆ ಇಲಾಖೆಯಿಂದ ಪೂರ್ಣ ಸಹಕಾರವನ್ನು ನೀಡುತ್ತೇವೆ. ಅರೋಗ್ಯ ತಪಸಣೆಯನ್ನು ಮಾಡುವುದು ಪ್ರತಿಯೊಬ್ಬನ ಕರ್ತವ್ಯವಾಗಿದ್ದು, ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿದ್ದರೆ ಸರಕಾರಿ ಅಸ್ಪತ್ರೆಗಳಲ್ಲಿ ನೂರಕ್ಕೆ ನೂರು ಉಚಿತ ಸೌಲಭ್ಯ ದೊರೆಯುತ್ತದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಆರೋಗ್ಯದ ಬಗ್ಗೆ ಗಮನ ಹೆಚ್ಚಾಗುತ್ತದೆ-ಜಯರಾಮ ರೈ ಅಡ್ಯೆತ್ತಿಮಾರು
ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ರೈ ಅಡ್ಯೆತ್ತಿಮಾರುರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ನಮ್ಮ ದೇವಾಲಯದಲ್ಲಿ ಆರೋಗ್ಯ ಶಿಬಿರ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದ್ದು, ದೇವಾಲಯದಲ್ಲಿ ದೇವರನ್ನು ಪೂಜಿಸುವ ನಾವು, ಅಸ್ಪತ್ರೆಗಳಲ್ಲಿ ವೈದ್ಯರನ್ನು ದೇವರಂತೆ ಕಾಣುವುದು ನಮ್ಮ ಸನಾತನ ಧರ್ಮವಾಗಿದೆ ಎಂದು ಹೇಳಿ, ಇಂಥ ಶಿಬಿರಗಳು ಸಮಾಜದಲ್ಲಿ ನಡೆದಲ್ಲಿ ಆರೋಗ್ಯದ ಬಗ್ಗೆ ಗಮನ ಹೆಚ್ಚಾಗುತ್ತದೆ ಎಂದರು.
ನಾವು ಆರೋಗ್ಯವಂತರಾಗಿ ಬಾಳಬಹುದು-ಡಾ. ಶ್ರೀಪತಿ ರಾವ್
ಪುತ್ತೂರು ಪ್ರಗತಿ ಸ್ಪೆಷಾಲಿಟಿ ಹಾಸ್ವಿಟಲ್ನ ಆಡಳಿತ ನಿರ್ದೇಶಕ ಡಾ. ಶ್ರೀಪತಿ ರಾವ್ರವರು ಮಾತನಾಡಿ ಪ್ರತಿದಿನ ಪ್ರತಿಯೊಬ್ಬರು ೪೫ ನಿಮಿಷ ವ್ಯಾಯಮಕ್ಕೆ ಸಮಯವನ್ನು ಮೀಸಲು ಇಡಬೇಕು, ಇದರಿಂದ ಬಹುತೇಕ ಕಾಯಿಲೆಗಳನ್ನು ದೂರ ಇಡಬಹುದು. ದುಶ್ಚಟಗಳಿಂದ ದೂರ ವಿದ್ದು, ಆಹಾರ ಪದ್ದತಿಯಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಿದಲ್ಲಿ ನಾವು ಆರೋಗ್ಯವಂತರಾಗ ಬಾಳಬಹುದು ಎಂದರು.
ಗ್ರಾಮದ ಸರ್ವಾಂಗೀಣ ಪ್ರಗತಿ- ಬೂಡಿಯಾರ್ ರಾಧಾಕೃಷ್ಣ ರೈ
ಕುರಿಯ ಗ್ರಾಮ ವಿಕಾಸ ಸಮಿತಿಯ ಗೌರವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಕುರಿಯ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಕುರಿಯ ಗ್ರಾಮ ವಿಕಾಸ ಸಮಿತಿಯನ್ನು ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜಿನ ವತಿಯಿಂದ ನಾವು ಹಮ್ಮಿಕೊಂಡಿದ್ದೇವೆ. ಈಗಾಗಲೇ ಕುರಿಯ ಗ್ರಾಮದಲ್ಲಿ ಮನೆ ಮನೆ ಭೇಟಿಯನ್ನು ಮಾಡಿ ಪ್ರತಿ ಮನೆಯ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಈಗಾಗಲೇ ಶೇ ೯೦ ರಷ್ಟು ಮನೆಗಳ ಮಾಹಿತಿ ಸಂಗ್ರಹವಾಗಿದೆ. ಇನ್ನು ೧೫ ದಿನದ ಒಳಗೆ ಕುರಿಯ ಗ್ರಾಮದ ಸಮಗ್ರ ಮಾಹಿತಿ ಸಿಗಲಿದೆ. ಗ್ರಾಮದ ಸರ್ವಾಂಗೀಣ ಪ್ರಗತಿಯನ್ನು ಮಾಡುವ ಮೂಲಕ ಕುರಿಯ ಗ್ರಾಮವನ್ನು ಮಾದರಿ ಗ್ರಾಮವಾಗಿ ರೂಪಿಸಲಿದ್ದೇವೆ ಎಂದು ಹೇಳಿದರು.
ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಿದೆ – ರೂಪಲೇಖ
ಇನ್ನರ್ ವ್ಹೀಲ್ ಕ್ಲಬ್, ಪುತ್ತೂರು ನಿಯೋಜಿತ ಅಧ್ಯಕ್ಷೆ ರೂಪಲೇಖರವರು ಸ್ವಾಗತಿಸಿ, ಮಾತನಾಡಿ ಇನ್ನರ್ ವೀಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಚರಿಸುವ ಮಹಿಳಾ ಸಂಘಟನೆಯಾಗಿದ್ದು, ೧೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಸಂಸ್ಥೆಯು ಸಮಾಜದಲ್ಲಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.
ವೇದಿಕೆಯಲ್ಲಿ ಕೆಎಂಸಿಯ ವೈದ್ಯ ಡಾ. ಅಭಿಷೇಕ್ ಕೃಷ್ಣ, ಕುರಿಯ ಗ್ರಾಮ ವಿಕಾಸ ಸಮಿತಿಯ ಕಾರ್ಯದರ್ಶಿ ಕೀರ್ತಿ ನಕ್ಷತ್ರಿತ್ತಾಯ ಉಪಸ್ಥಿತರಿದ್ದರು. ಕುರಿಯ ಗ್ರಾಮದ ಆಶಾ ಕಾರ್ಯಕರ್ತೆಯರು ಅತಿಥಿಗಳಿಗೆ ಹೂ ನೀಡಿ, ಗೌರವಿಸಿದರು. ಜ್ಞಾನ ರೈ ಅಡ್ಯೆತ್ತಿಮಾರು ಪ್ರಾರ್ಥನೆಗೈದರು. ಇನ್ನರ್ ವ್ಹೀಲ್ ಕ್ಲಬ್ ಸದಸ್ಯರಾದ ಸಂದ್ಯಾ ಸಾಯ, ಶಂಕರಿ ಎಸ್ ಭಟ್, ಕಾರ್ಯಕ್ರಮ ನಿರೂಪಿಸಿದರು. ಕುರಿಯ ಗ್ರಾಮ ವಿಕಾಸಮಿತಿಯ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲುಗುತ್ತು ವಂದಿಸಿದರು. ವೈದ್ಯರಾದ ಡಾ.ಮೇಘನಾ, ಡಾ.ಸಂದೀಪ್, ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಸಂಚಾಲಕ ಸಂತೋಷ್ ಬಿ, ಪ್ರಾಂಶುಪಾಲ ಪ್ರಸಾದ್ ಶಾನುಭಾಗ್, ಉಪನ್ಯಾಸಕ ಕಾರ್ತಿಕ್ ಕುಮಾರ್ ಎನ್, ಇನ್ನರ್ ವ್ಹೀಲ್ ಕ್ಲಬ್ ಸದಸ್ಯರಾದ ಶೋಭಾ ಕೋಳತ್ತಾಯ, ಲವ್ಲಿ ಸೂರಾಜ್, ಕುರಿಯ ಗ್ರಾಮ ವಿಕಾಸ ಸಮಿತಿಯ ಸದಸ್ಯರುಗಳು, ಕುರಿಯ ಉಳ್ಳಾಲ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರುಗಳು, ಊರವರು ಶಿಬಿರದಲ್ಲಿ ಭಾಗವಹಿಸಿದರು.
ಸಮಾರೋಪ ಸಮಾರಂಭ
ಮದ್ಯಾಹ್ನ ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ಭಾಗವಹಿಸಿದ ವೈದ್ಯರುಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಇನ್ನರ್ ವ್ಹೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ರೂಪಲೇಖಾ, ಕುರಿಯ ಗ್ರಾಮ ವಿಕಾಸಮಿತಿಯ ಗೌರವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲುಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಅಚ್ಚುಕಟ್ಟಾದ ವ್ಯವಸ್ಥೆ
ಶಿಬಿರಕ್ಕೆ ಆಗಮಿಸಿದ ಎಲ್ಲರಿಗೂ, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ, ಸಂಘಟಕರು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
ತುಂಬಾ ಉತ್ತಮವಾದ ರೀತಿಯಲ್ಲಿ ಶಿಬಿರ
ಉಚಿತ ಆರೋಗ್ಯ ತಪಸಣಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸುಮಾರು ೧೦೦ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ದೊರೆತ ಹಿನ್ನಲೆಯಲ್ಲಿ ಯಶಸ್ಸಿಯಾಗಿ ನಡೆಯಿತು. ಒಟ್ಟಿನಲ್ಲಿ ಶಿಬಿರದಿಂದಾಗಿ ಜನರಿಗೆ ಅರೋಗ್ಯದ ಬಗ್ಗೆ ಕಾಳಜಿ ಮೂಡಿಬಂದಿದೆ.
-ರೂಪಲೇಖಾ ನಿಯೋಜಿತ ಅಧ್ಯಕ್ಷೆ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು
ಮಾದರಿ ಕಾರ್ಯಕ್ರಮ ಕುರಿಯ ಗ್ರಾಮಕ್ಕೆ ಹೆಸರು
ಉಚಿತ ಅರೋಗ್ಯ ತಪಸಣಾ ಶಿಬಿರ ಅಚ್ಚುಕಟ್ಟಾಗಿ ನಡೆಯಿತು. ಶಿಬಿರದಿಂದ ತುಂಬಾ ಮಂದಿಗೆ ಪ್ರಯೋಜನವಾಗಿದೆ. ಮಾದರಿ ಕಾರ್ಯಕ್ರಮವಾಗಿ ನಡೆದು, ಕುರಿಯ ಗ್ರಾಮಕ್ಕೆ ಒಳ್ಳೆಯ ಹೆಸರು ಬಂದಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪರವಾದ ಕಾರ್ಯಕ್ರಮ ಮಾಡಲು ಪ್ರೇರಣೆ ನೀಡಿದೆ.
-ಕೆ.ಎಸ್.ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಅಧ್ಯಕ್ಷರು ಕುರಿಯ ಗ್ರಾಮ ವಿಕಾಸ ಸಮಿತಿ