ಸುದಾನ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಪರಿಷತ್ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು: ಕಲಿಕೆಯ ಉದ್ದೇಶವು ಅಂಕಗಳಿಕೆಗಷ್ಟೇ ಸೀಮಿತವಾಗಬಾರದು. ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಲು ಪ್ರೇರೇಪಿಸಬೇಕು ಎಂದು ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಭಟ್ ರಾಮಕುಂಜ ರವರು ಅಭಿಪ್ರಾಯಪಟ್ಟರು. ಅವರು ಸುದಾನ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಪರಿಷತ್ ಮತ್ತು ವಿವಿಧ ಕ್ಲಬ್ಗಳ ಉದ್ಘಾಟನಾ ಸಮಾರಂಭವನ್ನು ದೀಪೋಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.


ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಮನೋಹರ್ ಕುಮಾರ್ ರವರು ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿಕೊಂಡು ಶುಭಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಮಂಡಳಿಯ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಶಿಸ್ತಿನೊಂದಿಗೆ ತಮ್ಮದಾಗಿಸಿಕೊಳ್ಳಬೇಕೆಂದು ಹಲವು ಉದಾಹರಣೆಗಳೊಂದಿಗೆ ವಿವರಿಸಿದರು.


ನೂತನ ಶೈಕ್ಷಣಿಕ ವರ್ಷದಲ್ಲಿ ಕಾರ್ಯ ಚರಿಸಲಿರುವ ವಿವಿಧ ಸಂಘಗಳಾದ ಅವನಿ ವಿಜ್ಞಾನ ಸಂಘ ( ಶ್ಯಾಮಲಾ ಬಂಗೇರ), ಜಾಗೃತಿ ಸೋಶಿಯಲ್ ಕ್ಲಬ್ (ನಿಶ್ಮಿತಾ), ಲಹರಿ ಸಾಹಿತ್ಯ ಸಂಘ (ಅನಿತಾ), ದೃಷ್ಟಿ ಐಟಿ ಕ್ಲಬ್ (ರಂಜಿತ್ ಮಥಾಯಿಸ್), ಸ್ಪಂದನಾ ಇಂಟ್ಯರಾಕ್ಟ್ ಕ್ಲಬ್ (ಗ್ಲಾಡಿಸ್), ಶಕ್ತಿ ಸ್ಪೋಟ್ಸ್ ಕ್ಲಬ್ (ಪುಷ್ಪರಾಜ್) ಪ್ರತಿಭಾ ಕಲಾಸಂಘ (ಸರಸ್ವತಿ ಎಂ.ವಿ)ಗಳ ಮುನ್ನೋಟವನ್ನು ಸಂಘದ ನಿರ್ದೇಶಕರು ನೀಡಿದರು. ಕಲಾ ಶಿಕ್ಷಕರಾದ ಸದಾಶಿವ ಭಟ್ ರವರು ನಿರ್ಮಿಸಿದ ಬೃಹತ್ ಗಾತ್ರದ ಪುಸ್ತಕದಲ್ಲಿ ಚಿತ್ರಿಸಲಾಗಿದ್ದ ವಿವಿಧ ಸಂಘಗಳುಳ್ಳ ಪುಟಗಳನ್ನು ತೆರೆಯುವ ಮೂಲಕ ಅರ್ಥಪೂರ್ಣವಾಗಿ ಸಂಘಗಳನ್ನು ಉದ್ಘಾಟಿಸಲಾಯಿತು.

ಇದೇ ಸಂಧರ್ಭದಲ್ಲಿ ಶಾಲೆಯ ಭಿತ್ತಿಪತ್ರಿಕೆ ವಾಯ್ಸ್ ಆಫ್ ಸುದಾನವು ಬಿಡುಗಡೆಗೊಂಡಿತು. ಜಾಗೃತಿ ಸೋಶಿಯಲ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿ ವಂಶಿ ಎ ಪಿ (೧೦ನೇ) ಸ್ವಾಗತಿಸಿ, ರಿಯೋನಾ ವಿನಿಶ ವೇಗಸ್ (೯ನೇ) ಧನ್ಯವಾದವನ್ನರ್ಪಿಸಿದರು. ಸಹಶಿಕ್ಷಕರಾದ ನಿವೇದಿತಾ ಭಂಡಾರಿ, ಜೀವಿತಾ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here