ವಿಠಲ್ನಾಯಕ್ ಕಲ್ಲಡ್ಕ ಗೀತ ಸಾಹಿತ್ಯ ಸಂಭ್ರಮ- “ಪ್ರಗತಿ ಪ್ರಭಾ” 2025
“ಪ್ರಗತಿ ಒಂದು ವಿಶ್ವ ವಿದ್ಯಾನಿಲಯದಂತೆ ಇಲ್ಲಿ ಎಲ್ಲಾ ಜಿಲ್ಲೆಯ ವಿದ್ಯಾರ್ಥಿಗಳಿದ್ದಾರೆ”- ನಾರಾಯಣ ರೈ ಕುಕ್ಕುವಳ್ಳಿ
ಈಜು ಮನುಷ್ಯನ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅವಶ್ಯಕ”- ಪಾರ್ಥ ವಾರಾಣಾಸಿ
” ಚಿಕ್ಕ ಮಕ್ಕಳು ನಮ್ಮ ತೊಡೆಯ ಮೇಲೆ ಕುಳಿತು ಹೇಸಿಗೆ ಮಾಡಿದರೆ ನಾವು ನಮ್ಮ ತೊಡೆಯನ್ನು ಕತ್ತರಿಸದೆ, ಅದನ್ನು ಶುಚಿಗೊಳಿಸುತ್ತೇವೆ”- ಗೋಕುಲ್ನಾಥ್ ಪಿ.ವಿ.
“ಮೊಬೈಲ್ನಿಂದ ದೂರವಿದ್ದು ನಮ್ಮ ಮೇಲೆ ನಂಂಬಿಕೆ ಇಟ್ಟು ಓದುವ ಕಡೆ ಗಮನ ಕೊಡಬೇಕು”- ರಕ್ಷಿತಾ

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನ ಪೋಷಕರ ಮಹಾಸಭೆ- “ಪ್ರಗತಿ ಪ್ರಭಾ” ಕಾರ್ಯಕ್ರಮವು ಬೊಳ್ವಾರು ಮಹಾವೀರ ವೆಂಚರ್ಸ್ ಹವಾನಿಯಂತ್ರಿತ ಸಭಾಂಗಣದಲ್ಲಿ ಜೂನ್ 29 ರಂದು ನಡೆಯಿತು.
ದಕ್ಷಿಣಕನ್ನಡ ಬಿ.ಜೆ.ಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶೇಷ ಅತಿಥಿ , ವಾಗ್ಮಿ ಹಾಗೂ ಶಿಕ್ಷಕ ವಿಠಲನಾಯಕ್ ಕಲ್ಲಡ್ಕ ಮಾತನಾಡಿ, ಇವತ್ತು ಪೋಷಕರು ವಿದ್ಯಾರ್ಥಿಗಳಿಂದ ದೂರವಿದ್ದು ಒಂದೇ ಮನೆಯಲ್ಲಿ ಮಾತುಕತೆಗಳು ಕಡಿಮೆಯಾಗಿದೆ. ಒಂದು ಕಾಲದಲ್ಲಿ ಮನೆಯವರೆಲ್ಲಾ ಒಟ್ಟು ಸೇರಿ ಊಟ ಮಾಡುವ ಪದ್ಧತಿ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕಾಣದಾಗಿದೆ . ವಿದ್ಯಾರ್ಥಿಗಳು ಜೀವನದಲ್ಲಿ ತಾವು ದುಡಿದು ವಸ್ತುಗಳನ್ನು ಸಂಪಾದಿಸಿ ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಬೇಕೇ ಹೊರತು ಪೋಷಕರಿಗೆ ತೊಂದರೆ ನೀಡಿ ಪಡೆದುಕೊಳ್ಳಬಾರದು ಎಂದು ಹೇಳಿದರು.
ನಮ್ಮ ಮಕ್ಕಳನ್ನು ಉತ್ತಮ ಸಾಧನೆ ಮಾಡುವಾಗ ಮಾತ್ರ ಗೌರವಿಸುವುದು ಅಲ್ಲ ಮಕ್ಕಳ ಜೊತೆ ಪ್ರತಿದಿನ ಮಾತನಾಡಬೇಕು. ಜೀವನದಲ್ಲಿ ನಾಲ್ಕು Mಗಳಿಂದ ದೂರ ಇರಬೇಕು. . Mobile, Media, Motor Bike, Money ಇದರಿಂದ ಸ್ವಲ್ಪ ದೂರವಿರಬೇಕು ಎಷ್ಟು ಬೇಕು ಅಷ್ಟು ಮಾತ್ರ ಬಳಸಬೇಕು ನಮ್ಮ ಜೀವನದಲ್ಲಿ ಒಳ್ಳೆಯ ಸ್ನೇಹಿತರಿರಬೇಕು. ಸ್ನೇಹಿತರು ಜೀವನದಲ್ಲಿ ಉತ್ತಮ ಮಾರ್ಗದರ್ಶಕರಾಗಬೇಕು ಅಂತಹ ಗೆಳೆತನವಿರಬೇಕು. ಜೀವನದಲ್ಲಿ ನಮ್ಮ ತಂದೆ-ತಾಯಿಯರನ್ನು ಅತ್ಯಂತ ಗೌರವಯುತವಾಗಿ ನಡೆಸಬೇಕು. ಅವರು ಇಲ್ಲದೆ ಇರುವಾಗ ಅವರ ಬಗ್ಗೆ ಅಭಿಮಾನದಿಂದ ಮಾತನಾಡುವ ಮೊದಲು ಜೀವಂತವಾಗಿರುವಾಗ ಗೌರವಿಸಬೇಕು, ನಮ್ಮ ಜೀವನದಲ್ಲಿ ಮೂರು S ಬಹಳ ಮುಖ್ಯ Soul, Service ಹಾಗೂ Smile. ಎಲ್ಲ ಮಕ್ಕಳಿಗೆ ಭಗವಂತ ಪ್ರತಿಭೆಯನ್ನು ನೀಡಿರುತ್ತಾನೆ. ಅಂಕದಲ್ಲಿ ಫೇಲ್ ಆದರೂ ಜೀವನದಲ್ಲಿ Fail ಆಗುವುದಿಲ್ಲ. ತಮ್ಮ ಪ್ರತಿಭೆಯ ಮೂಲಕ ಜೀವನ ಕಟ್ಟಬಹುದು ಎನ್ನತ್ತಾ ಪ್ರಗತಿಯ ಎಲ್ಲ ಕಾರ್ಯಕ್ರಮಗಳು ಅತ್ಯಂತ ಸುಗಮವಾಗಲಿ ಅಂಕಗಳು ಕಡಿಮೆ ಎಂಬ ಕಾರಣಕ್ಕೆ ಪ್ರಗತಿಗೆ ಸೇರಿದ ಎಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಗುರುತಿಸಲ್ಪಡುವ ವ್ಯಕ್ತಿಗಳಾಗುತ್ತೀರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷಯನ್ನು ವಹಿಸಿದ ಹಿರಿಯ ಸಾಹಿತಿ ಮತ್ತು ಮಧು ಪ್ರಪಂಚ ಪತ್ರಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಜೀವನದಲ್ಲಿ ಗುರು ಹಾಗೂ ಗುರಿ ಒಟ್ಟಿಗೆ ಇರಬೇಕು ಉತ್ತಮವಾದ ಗುರುವಿನಿಂದ ಮಾತ್ರ ಗುರಿ ತಲುಪಲು ಸಾಧ್ಯ. ಪ್ರಗತಿ ಒಂದು ವಿಶ್ವ ವಿದ್ಯಾನಿಲಯದಂತೆ. ಪ್ರಗತಿಯಲ್ಲಿ ಎಲ್ಲಾ ಜಿಲ್ಲೆಯ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣದಲ್ಲಿ ಎಡವಿದ ಮಕ್ಕಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿರುವುದು, ಪ್ರಗತಿ ಸಂಸ್ಥೆಯ ವಿಶೇಷತೆಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್ನಾಥ್ ಪಿ.ವಿ.ಮಾತನಾಡಿ, ನಮ್ಮ ಜೀವನದಲ್ಲಿ ನಮ್ಮ ಸ್ವಂತ ಮಕ್ಕಳು ಚಿಕ್ಕವರಿದ್ದಾಗ ನಮ್ಮ ತೊಡೆಯ ಮೇಲೆ ಕುಳಿತು ಹೇಸಿಗೆ ಮಾಡಿದರೆ ನಾವು ನಮ್ಮ ತೊಡೆಯನ್ನು ಕತ್ತರಿಸದೆ, ಅದನ್ನು ಹೇಗೆ ಶುಚಿಗೊಳಿಸುತ್ತೇವೆಯೋ ಹಾಗೆಯೇ ಪ್ರಗತಿಯಲ್ಲಿ ಕಲಿಯುವ ಎಲ್ಲ ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದಿ ತೀಡಿ ಸರಿಪಡಿಸುತ್ತೆನೆ. ಎಲ್ಲ ಮಕ್ಕಳು ನನ್ನ ಸ್ವಂತ ಮಕ್ಕಳಂತೆ. ನಾನು ನನ್ನ ಜೀವನದಲ್ಲಿ ಏನು ಸಂಪಾದಿಸಿದೆ ಎಂದರೆ ಹಲವಾರು ವಿದ್ಯಾರ್ಥಿಗಳ ಪ್ರೀತಿ, ಗೌರವ ಎಂದರು.
ಮುಖ್ಯ ಅತಿಥಿ, ವೀ ಸ್ವಿಮ್ ಅಕಾಡಮಿಯ ನಿರ್ದೇಶಕ ಪಾರ್ಥ ವಾರಾಣಾಸಿ ಮಾತನಾಡಿ, ಮೆದುಳಿನ ಬಳಕೆ ಹಾಗೂ ಈಜಿನ ಮಹತ್ವವನ್ನು ತಿಳಿಸಿದರು. ಸಾಮನ್ಯವಾಗಿ ಮನುಷ್ಯ ಆಹಾರ, ನೀರು ಇದರ ಬಳಕೆಯ ಕುರಿತು ಯೋಚಿಸುತ್ತಾರೆ. ಆದರೆ ತಾನು ಎಷ್ಟು ಪ್ರಮಾಣದಲ್ಲಿ ಗಾಳಿಯನ್ನು ಸೇವನೆ ಮಾಡುತ್ತೇವೆ ಎಂಬುದನ್ನು ಯೋಚಿಸಿರುವುದಿಲ್ಲ ಎಂದರು.
ಗೌರವಾರ್ಪಣೆ
ಕಾರ್ಯಕಮದಲ್ಲಿ ಸಂಸ್ಥೆಯ ವಿದ್ಯಾರ್ಥಿಯಾದ ಗಗನ್ ಪೋಷಕರಾದ ಸೋಮಶೇಖರ ಹಾಗೂ ಅಶ್ವಿನಿ ದಂಪತಿಗಳನ್ನು,ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಕಲಾ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ರಕ್ಷಿತಾ ಅವರನ್ನು ಗೌರವಿಸಲಾಯಿತು.ಬಳಿಕ ಮಾತನಾಡಿದ ರಕ್ಷಿತಾ ನಾವು ನಮ್ಮ ಜೀವನದಲ್ಲಿ ಸಾಧನೆ ಹೇಗೆ ಮಾಡುವುದು ಎಂಬುವುದರ ಕುರಿತು ಯೋಚಿಸಬೇಕು, ನಾವು ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಬೇಕು. ಮೊಬೈಲಿನಿಂದ ದೂರ ಇದ್ದು ನಮ್ಮ ಮೇಲೆ ನಂಬಿಕೆ ಇಟ್ಟು ಓದುವ ಕಡೆ ಗಮನ ಕೊಡಬೇಕು ಎಂದರು.
ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ ನಾಥ್ ಮಾತನಾಡಿ, ಹಾಸ್ಟೇಲ್ ವಿದ್ಯಾರ್ಥಿಗಳು ಶಿಸ್ತಿನಿಂದ ಇದ್ದು ಅದಕ್ಕೆ ಪೋಷಕರು ಸಹಕರಿಸಬೇಕು. ವಿದ್ಯಾರ್ಥಿಗಳು ಮೊಬೈಲಿನಿಂದ ದೂರ ಇದ್ದು ಸ್ವಯಂ ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಗತಿ ವಿಸ್ತಾರ ಏವಿಯೇಷನ್ ಆಂಡ್ ಮ್ಯಾನೆಜ್ಮೆಂಟ್ ಸಂಸ್ಥೆಯ ಸಿಬ್ಬಂದಿ ಪೂಜಾ ಏವಿಯೇಷನ್ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಕೋರ್ಸುಗಳ ಹಾಗೂ ಅದರ ಉಪಯುಕ್ತತೆ ಕುರಿತು ಮಾಹಿತಿ ತಿಳಿಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಎನ್ ಡಿ ಮಾತನಾಡಿ, ನೂತನ ವರ್ಷದ ಮಂತ್ರಿಮಂಡಲದ ವಿವಿಧ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಟೀಸರ್ ಬಿಡುಗಡೆ
ಕಾರ್ಯಕ್ರಮದಲ್ಲಿ ಜುಲೈ 11 ರಂದು ಬಿಡುಗಡೆಯಾಗಲಿರುವ “ಧರ್ಮಚಾವಡಿ” ಚಿತ್ರತಂಡದ ನಿರ್ಮಾಪಕ ಜಗದೀಶ್ ಅಮೀನ್, ನಾಯಕಿ ಧನ್ಯ ಪೂಜಾರಿ, ಉಪನಾಯಕಿ ಸಂಸ್ಥೆಯ ಕಛೇರಿ ಸಿಬ್ಬಂದಿ ನಿಶ್ಮಿತಾ ಶೆಟ್ಟಿ, ತಂಡದ ಸಹ ನಿರ್ದೇಶಕ ಕೀರ್ತನ್ ಶೆಟ್ಟಿ ಹಾಗೂ ತಂಡದ ಕಲಾವಿದರು ಸಿನಿಮಾದ ಟೀಸರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ಪೋಷಕರು, ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಆಂಡ್ ಮ್ಯಾನೆಜ್ಮೆಂಟ್ ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಾನಿಧ್ಯ, ಕೀರ್ತನಾ, ಜನನಿ, ಆದಿತ್ಯ ಇವರು ಪ್ರಾರ್ಥಿಸಿದರು.ಆದಿತ್ಯ ಇವರ ಸ್ವಾಗತ ನೃತ್ಯ ಪ್ರದರ್ಶನವಿತ್ತರು. ವ್ಯವಹಾರ ಅಧ್ಯಯನ ಉಪನ್ಯಾಸಕಿ ಹರ್ಷಿತಾ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ವಂದನ ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ನಾಸಿರ್ ಕಾರ್ಯಕ್ರಮವನ್ನು ನಿರೂಪಿಸಿದರು.